ಬೆಳ್ತಂಗಡಿ: ಕಳೆದ ಬಾರಿ ಪುಣ್ಯ ರಮಳಾನಿನ 30 ದಿವಸಗಳಲ್ಲಿ ಬೆಳಗ್ಗಿನ ನಮಾಝ್ಗೆ ತಪ್ಪದೇ ಹಾಜರಾದ ಗುರುವಾಯನಕೆರೆ ಇಹ್ಯಾವುಲ್ ಇಸ್ಲಾಂ ಮದರಸದ ಐವರು ವಿದ್ಯಾರ್ಥಿಗಳಿಗೆ ಗುರುವಾಯನಕೆರೆಯ ಉದ್ಯಮಿ, ಸಂಘಟಕ ಉಮರ್ ಜಿ.ಕೆ ಸೈಕಲ್ ಕೊಡುಗೆಯಾಗಿ ನೀಡಿದ್ದಾರೆ.
ಮುಹಮ್ಮದ್ ನೌಫಲ್, ಮುಹಮ್ಮದ್ ಇಹ್ಸಾನ್, ಮುಹಮ್ಮದ್ ಹಫೀಝ್, ಮುಹಮ್ಮದ್ ಇಫಾಝ್ ಮತ್ತು ಮುಹಮ್ಮದ್ ತಂಝೀಲ್ ಸೈಕಲ್ ಸ್ವೀಕರಿಸಿದರು.
ಉಮರ್ ಜಿ.ಕೆ ಅವರು ತಮ್ಮ ತಂದೆಯವರಾದ ಮರ್ಹೂಂ ಹಾಜಿ ಅಬ್ದುರಹ್ಮಾನ್ ಅಲಾದಿ ಕೊಟ್ಟಿಗೆ ಅವರ ಸ್ಮರಣಾರ್ಥ ಈ ಕೊಡುಗೆ ನೀಡಿದ್ದಾರೆ.











