September 1, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆಯಲ್ಲಿ ಸಾರಥಿ ಮೋಟಾರ್ ಲಿಂಕ್ಸ್ -ಹೊಗೆ ತಪಾಸಣಾ ಕೇಂದ್ರ ಶುಭಾರಂಭ

ಉಜಿರೆ : ಜಗತ್ತಿನಲ್ಲಿ ಆಟೋಮೊಬೈಲ್ ಕ್ಷೇತ್ರದ ಬೆಳವಣಿಗೆ ಕುಂಠಿತವಾಗಿಲ್ಲ. ಕಳೆದ 1೦ ವರ್ಷಗಳಲ್ಲಿ ಉಜಿರೆಯಲ್ಲಿ ವಾಹನಗಳ ಸಂಖ್ಯೆ 3 ಪಟ್ಟು ಹೆಚ್ಚಿದೆ. ಒಂದೊಂದು ಮನೆಯಲ್ಲಿ  2.3  ವಾಹನಗಳಿರುತ್ತವೆ. ವಾಹನಗಳ ಚಾ ಲನಾವ್ಯವಸ್ಥೆಗೆ  ಪೂರಕವಾಗಿ  ಕ್ರಿಯಾಶೀಲ ,ಯುವ ಉದ್ಯಮಿ   ಪ್ರಾಣೇಶ್ ಮೂಡಿತ್ತಾಯ  ಒಳ್ಳೆಯ ಉದ್ದೇಶ ಹಾಗು ಮನಸ್ಸು ಹೊಂದಿ  ಸಾರಥಿಯ ಮತ್ತೊಂದು ಶಾಖೆಯನ್ನು  ಹೊಗೆ  ತಪಾಸಣಾ  ಸೌಲಭ್ಯದೊಂದಿಗೆ ಪ್ರಾರಂಭಿಸುತ್ತಿರುವುದು  ಪರಿಸರದ ಗ್ರಾಹಕರಿಗೆ ಒಳ್ಳೆಯ ಸೇವೆ ನೀಡುವ ಮೂಲಕ  ಯುವಕರಿಗೆ ಮಾದರಿಯಾಗಿದ್ದಾರೆ. ಎಲ್ಲರ ಸಹಕಾರದಿಂದ ಉದ್ಯಮದಲ್ಲಿ ಯಶಸ್ಸು  ಗಳಿಸಲಿ ಎಂದು ಉಜಿರೆ ಶ್ರೀ ಜನಾರ್ದನ ದೇವ ಸ್ಥಾನದ  ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಹೇಳಿದರು.                 

ಅವರು ಆ 31 ರಂದು ಉಜಿರೆಯ ಚಾರ್ಮಾಡಿ  ಮುಖ್ಯ ರಸ್ತೆಯ ಮಾರುತಿ  ಶೋ ರೂಂ  ಮುಂಭಾಗದಲ್ಲಿ  ಸಾರಥಿ ಮೋಟಾರ್ ಲಿಂಕ್ಸ್ ಮತ್ತು  ಹೊಗೆ   ತಪಾಸಣಾ ಕೇಂದ್ರವನ್ನು ಉದ್ಘಾಟಿಸಿ ಶುಭ ಕೋರಿದರು.  ಮುಖ್ಯ ಅತಿಥಿ ವೇದಮೂರ್ತಿ ರಾಜಗೋಪಾಲ ಎಡಪಡಿತ್ತಾಯ  ಮಾತನಾಡಿ   ದೈವ ದೇವರ ಅನುಗ್ರಹ,ಹಿ ರಿಯರ ಆಶೀರ್ವಾದ, ಪರಿಶ್ರಮ,ಪ್ರಯತ್ನದ ಛಲದಿಂದ  ಯಶಸ್ಸು ಗಳಿಸಲು ಸಾಧ್ಯ. ಶ್ರದ್ಧೆ,ನಿಷ್ಠೆ,ಭಕ್ತಿ ಇದ್ದರೆ  ಭಗವಂತನ ಪೂರ್ಣಾನುಗ್ರಹದಿಂದ  ಉದ್ಯಮ ಯಶಸ್ವಿಯಾಗುವುದು ಎಂದು ಶುಭ ಹಾರೈಸಿದರು.ಕನಸಿನ ಮನೆ  ಲಕ್ಷ್ಮಿ ಗ್ರೂಪ್  ಮಾಲಕ .ಮೋಹನ ಕುಮಾರ್  ಮಾತನಾಡಿ  ಸ್ವಂತ ಊರಿನಲ್ಲಿ ಉದ್ಯಮ   ಆರಂಭಿಸಿ  ಸಾಧನೆ ಹಾಗೂ ಸಿಬಂದಿಗಳ ಪರಿಶ್ರಮದಿಂದ  ಸಾರ್ವಜನಿಕರಿಗೆ  ಒಳ್ಳೆಯ ಸೇವೆ ನೀಡಿದರೆ ಸಂಸ್ಥೆ ಬೆ ಳೆಯುವುದರಲ್ಲಿ ಸಂದೇಹವಿಲ್ಲ ಎಂದು ಶುಭ ಹಾರೈಸಿದರು. ಜಯಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.                                                                                 

ಸಾರಥಿಯ ಮಾಲಕ ಪ್ರಾಣೇಶ್ ಮೂಡಿತ್ತಾಯ,ಹಿರಿಯರಾದ ಕೇಶವ ಮೂಡಿತ್ತಾಯ,ಶಾಂತ ಮೂಡಿತ್ತಾಯ  ಮತ್ತು ಸಿಬಂದಿ ವರ್ಗ  ಅತಿಥಿಗಳನ್ನು ಸ್ವಾಗತಿಸಿ,ಸ್ಮರ ಣಿಕೆ ನೀಡಿ ಗೌರವಿಸಿದರು. ಮುರಳಿಕೃಷ್ಣ ಆಚಾರ್ ಕಾರ್ಯಕ್ರಮ ನಿರ್ವಹಿ ಸಿ ,ವಂದಿಸಿದರು 

Related posts

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಎಲ್ ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಗೆ ಸಮಗ್ರ ಪ್ರಶಸ್ತಿ

Suddi Udaya

ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ವೇಣೂರು ಪ್ರಖಂಡ,ಹಿಂದೂ ಹೃದಯ ಸಂಗಮ ಸಮಿತಿ ಆಶ್ರಯದಲ್ಲಿ ಡಿ. 10 ರಂದು ಅಳದಂಗಡಿಯಲ್ಲಿ ಬೃಹತ್ ಹಿಂದೂ ಹೃದಯ ಸಂಗಮ ಕಾರ್ಯಕ್ರಮ

Suddi Udaya

ಹಿಂದೂ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ರವರಿಂದ “ದಿವ್ಯ ಜ್ಯೋತಿ” ಬಿರುದು ಪುರಸ್ಕೃತೆ ಕು.ಅದ್ವಿತಿ ರಾವ್ ರವರಿಗೆ ಸನ್ಮಾನ

Suddi Udaya

ಕಲ್ಮಂಜ : ಸಿದ್ದಬೈಲು ಪರಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಣೆ

Suddi Udaya

ಜಿಲ್ಲೆಯ ಬಡವರ ಮನೆ ಕಟ್ಟುವ ಮರಳಿನ ಸಮಸ್ಯೆ ಸರಿಪಡಿಸುವಂತೆ ಮೋಹನ್ ಗೌಡ ಕಲ್ಮಂಜ ರವರಿಂದ ಸರಕಾರಕ್ಕೆ ಮನವಿ

Suddi Udaya

ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಸಂಘದ ನಿಡ್ಲೆ ಶಾಖೆಯ ಉದ್ಘಾಟನೆ

Suddi Udaya
error: Content is protected !!