ಉಜಿರೆ : ಜಗತ್ತಿನಲ್ಲಿ ಆಟೋಮೊಬೈಲ್ ಕ್ಷೇತ್ರದ ಬೆಳವಣಿಗೆ ಕುಂಠಿತವಾಗಿಲ್ಲ. ಕಳೆದ 1೦ ವರ್ಷಗಳಲ್ಲಿ ಉಜಿರೆಯಲ್ಲಿ ವಾಹನಗಳ ಸಂಖ್ಯೆ 3 ಪಟ್ಟು ಹೆಚ್ಚಿದೆ. ಒಂದೊಂದು ಮನೆಯಲ್ಲಿ 2.3 ವಾಹನಗಳಿರುತ್ತವೆ. ವಾಹನಗಳ ಚಾ ಲನಾವ್ಯವಸ್ಥೆಗೆ ಪೂರಕವಾಗಿ ಕ್ರಿಯಾಶೀಲ ,ಯುವ ಉದ್ಯಮಿ ಪ್ರಾಣೇಶ್ ಮೂಡಿತ್ತಾಯ ಒಳ್ಳೆಯ ಉದ್ದೇಶ ಹಾಗು ಮನಸ್ಸು ಹೊಂದಿ ಸಾರಥಿಯ ಮತ್ತೊಂದು ಶಾಖೆಯನ್ನು ಹೊಗೆ ತಪಾಸಣಾ ಸೌಲಭ್ಯದೊಂದಿಗೆ ಪ್ರಾರಂಭಿಸುತ್ತಿರುವುದು ಪರಿಸರದ ಗ್ರಾಹಕರಿಗೆ ಒಳ್ಳೆಯ ಸೇವೆ ನೀಡುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ. ಎಲ್ಲರ ಸಹಕಾರದಿಂದ ಉದ್ಯಮದಲ್ಲಿ ಯಶಸ್ಸು ಗಳಿಸಲಿ ಎಂದು ಉಜಿರೆ ಶ್ರೀ ಜನಾರ್ದನ ದೇವ ಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಹೇಳಿದರು.

ಅವರು ಆ 31 ರಂದು ಉಜಿರೆಯ ಚಾರ್ಮಾಡಿ ಮುಖ್ಯ ರಸ್ತೆಯ ಮಾರುತಿ ಶೋ ರೂಂ ಮುಂಭಾಗದಲ್ಲಿ ಸಾರಥಿ ಮೋಟಾರ್ ಲಿಂಕ್ಸ್ ಮತ್ತು ಹೊಗೆ ತಪಾಸಣಾ ಕೇಂದ್ರವನ್ನು ಉದ್ಘಾಟಿಸಿ ಶುಭ ಕೋರಿದರು. ಮುಖ್ಯ ಅತಿಥಿ ವೇದಮೂರ್ತಿ ರಾಜಗೋಪಾಲ ಎಡಪಡಿತ್ತಾಯ ಮಾತನಾಡಿ ದೈವ ದೇವರ ಅನುಗ್ರಹ,ಹಿ ರಿಯರ ಆಶೀರ್ವಾದ, ಪರಿಶ್ರಮ,ಪ್ರಯತ್ನದ ಛಲದಿಂದ ಯಶಸ್ಸು ಗಳಿಸಲು ಸಾಧ್ಯ. ಶ್ರದ್ಧೆ,ನಿಷ್ಠೆ,ಭಕ್ತಿ ಇದ್ದರೆ ಭಗವಂತನ ಪೂರ್ಣಾನುಗ್ರಹದಿಂದ ಉದ್ಯಮ ಯಶಸ್ವಿಯಾಗುವುದು ಎಂದು ಶುಭ ಹಾರೈಸಿದರು.ಕನಸಿನ ಮನೆ ಲಕ್ಷ್ಮಿ ಗ್ರೂಪ್ ಮಾಲಕ .ಮೋಹನ ಕುಮಾರ್ ಮಾತನಾಡಿ ಸ್ವಂತ ಊರಿನಲ್ಲಿ ಉದ್ಯಮ ಆರಂಭಿಸಿ ಸಾಧನೆ ಹಾಗೂ ಸಿಬಂದಿಗಳ ಪರಿಶ್ರಮದಿಂದ ಸಾರ್ವಜನಿಕರಿಗೆ ಒಳ್ಳೆಯ ಸೇವೆ ನೀಡಿದರೆ ಸಂಸ್ಥೆ ಬೆ ಳೆಯುವುದರಲ್ಲಿ ಸಂದೇಹವಿಲ್ಲ ಎಂದು ಶುಭ ಹಾರೈಸಿದರು. ಜಯಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.
ಸಾರಥಿಯ ಮಾಲಕ ಪ್ರಾಣೇಶ್ ಮೂಡಿತ್ತಾಯ,ಹಿರಿಯರಾದ ಕೇಶವ ಮೂಡಿತ್ತಾಯ,ಶಾಂತ ಮೂಡಿತ್ತಾಯ ಮತ್ತು ಸಿಬಂದಿ ವರ್ಗ ಅತಿಥಿಗಳನ್ನು ಸ್ವಾಗತಿಸಿ,ಸ್ಮರ ಣಿಕೆ ನೀಡಿ ಗೌರವಿಸಿದರು. ಮುರಳಿಕೃಷ್ಣ ಆಚಾರ್ ಕಾರ್ಯಕ್ರಮ ನಿರ್ವಹಿ ಸಿ ,ವಂದಿಸಿದರು











