September 1, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆಯಲ್ಲಿ ಸಾರಥಿ ಮೋಟಾರ್ ಲಿಂಕ್ಸ್ -ಹೊಗೆ ತಪಾಸಣಾ ಕೇಂದ್ರ ಶುಭಾರಂಭ

ಉಜಿರೆ : ಜಗತ್ತಿನಲ್ಲಿ ಆಟೋಮೊಬೈಲ್ ಕ್ಷೇತ್ರದ ಬೆಳವಣಿಗೆ ಕುಂಠಿತವಾಗಿಲ್ಲ. ಕಳೆದ 1೦ ವರ್ಷಗಳಲ್ಲಿ ಉಜಿರೆಯಲ್ಲಿ ವಾಹನಗಳ ಸಂಖ್ಯೆ 3 ಪಟ್ಟು ಹೆಚ್ಚಿದೆ. ಒಂದೊಂದು ಮನೆಯಲ್ಲಿ  2.3  ವಾಹನಗಳಿರುತ್ತವೆ. ವಾಹನಗಳ ಚಾ ಲನಾವ್ಯವಸ್ಥೆಗೆ  ಪೂರಕವಾಗಿ  ಕ್ರಿಯಾಶೀಲ ,ಯುವ ಉದ್ಯಮಿ   ಪ್ರಾಣೇಶ್ ಮೂಡಿತ್ತಾಯ  ಒಳ್ಳೆಯ ಉದ್ದೇಶ ಹಾಗು ಮನಸ್ಸು ಹೊಂದಿ  ಸಾರಥಿಯ ಮತ್ತೊಂದು ಶಾಖೆಯನ್ನು  ಹೊಗೆ  ತಪಾಸಣಾ  ಸೌಲಭ್ಯದೊಂದಿಗೆ ಪ್ರಾರಂಭಿಸುತ್ತಿರುವುದು  ಪರಿಸರದ ಗ್ರಾಹಕರಿಗೆ ಒಳ್ಳೆಯ ಸೇವೆ ನೀಡುವ ಮೂಲಕ  ಯುವಕರಿಗೆ ಮಾದರಿಯಾಗಿದ್ದಾರೆ. ಎಲ್ಲರ ಸಹಕಾರದಿಂದ ಉದ್ಯಮದಲ್ಲಿ ಯಶಸ್ಸು  ಗಳಿಸಲಿ ಎಂದು ಉಜಿರೆ ಶ್ರೀ ಜನಾರ್ದನ ದೇವ ಸ್ಥಾನದ  ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಹೇಳಿದರು.                 

ಅವರು ಆ 31 ರಂದು ಉಜಿರೆಯ ಚಾರ್ಮಾಡಿ  ಮುಖ್ಯ ರಸ್ತೆಯ ಮಾರುತಿ  ಶೋ ರೂಂ  ಮುಂಭಾಗದಲ್ಲಿ  ಸಾರಥಿ ಮೋಟಾರ್ ಲಿಂಕ್ಸ್ ಮತ್ತು  ಹೊಗೆ   ತಪಾಸಣಾ ಕೇಂದ್ರವನ್ನು ಉದ್ಘಾಟಿಸಿ ಶುಭ ಕೋರಿದರು.  ಮುಖ್ಯ ಅತಿಥಿ ವೇದಮೂರ್ತಿ ರಾಜಗೋಪಾಲ ಎಡಪಡಿತ್ತಾಯ  ಮಾತನಾಡಿ   ದೈವ ದೇವರ ಅನುಗ್ರಹ,ಹಿ ರಿಯರ ಆಶೀರ್ವಾದ, ಪರಿಶ್ರಮ,ಪ್ರಯತ್ನದ ಛಲದಿಂದ  ಯಶಸ್ಸು ಗಳಿಸಲು ಸಾಧ್ಯ. ಶ್ರದ್ಧೆ,ನಿಷ್ಠೆ,ಭಕ್ತಿ ಇದ್ದರೆ  ಭಗವಂತನ ಪೂರ್ಣಾನುಗ್ರಹದಿಂದ  ಉದ್ಯಮ ಯಶಸ್ವಿಯಾಗುವುದು ಎಂದು ಶುಭ ಹಾರೈಸಿದರು.ಕನಸಿನ ಮನೆ  ಲಕ್ಷ್ಮಿ ಗ್ರೂಪ್  ಮಾಲಕ .ಮೋಹನ ಕುಮಾರ್  ಮಾತನಾಡಿ  ಸ್ವಂತ ಊರಿನಲ್ಲಿ ಉದ್ಯಮ   ಆರಂಭಿಸಿ  ಸಾಧನೆ ಹಾಗೂ ಸಿಬಂದಿಗಳ ಪರಿಶ್ರಮದಿಂದ  ಸಾರ್ವಜನಿಕರಿಗೆ  ಒಳ್ಳೆಯ ಸೇವೆ ನೀಡಿದರೆ ಸಂಸ್ಥೆ ಬೆ ಳೆಯುವುದರಲ್ಲಿ ಸಂದೇಹವಿಲ್ಲ ಎಂದು ಶುಭ ಹಾರೈಸಿದರು. ಜಯಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.                                                                                 

ಸಾರಥಿಯ ಮಾಲಕ ಪ್ರಾಣೇಶ್ ಮೂಡಿತ್ತಾಯ,ಹಿರಿಯರಾದ ಕೇಶವ ಮೂಡಿತ್ತಾಯ,ಶಾಂತ ಮೂಡಿತ್ತಾಯ  ಮತ್ತು ಸಿಬಂದಿ ವರ್ಗ  ಅತಿಥಿಗಳನ್ನು ಸ್ವಾಗತಿಸಿ,ಸ್ಮರ ಣಿಕೆ ನೀಡಿ ಗೌರವಿಸಿದರು. ಮುರಳಿಕೃಷ್ಣ ಆಚಾರ್ ಕಾರ್ಯಕ್ರಮ ನಿರ್ವಹಿ ಸಿ ,ವಂದಿಸಿದರು 

Related posts

ಪಾಸ್ಕ ಹಬ್ಬದ ಅಂಗವಾಗಿ ಹನ್ನೆರಡು ಜನ ಶಿಷ್ಯರ ಕಾಲುಗಳನ್ನು ತೊಳೆದ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಲಾರೆನ್ಸ್

Suddi Udaya

ಬೆಳ್ತಂಗಡಿ ಜೂನಿಯರ್ ಕಾಲೇಜಿನಲ್ಲಿ ಸಿಇಟಿ ತರಬೇತಿ ಮತ್ತು ಸ್ಪೋಕನ್ ಇಂಗ್ಲೀಷ್ ಕ್ಲಾಸ್ ಉದ್ಘಾಟನೆ

Suddi Udaya

ನೀರ್ನಳ್ಳಿ ಗಣಪತಿಯವರಿಗೆ ಉಂಡೆಮನೆ ಗೌರವ ಪ್ರಶಸ್ತಿ

Suddi Udaya

ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಕಳೆಂಜ ಗ್ರಾ. ಪಂ. ನಲ್ಲಿ ಪ್ರತಿಭಟನೆ

Suddi Udaya

ಮಂಗಳೂರುನಲ್ಲಿ ಪ್ರಜಾಧ್ವನಿ ಯಾತ್ರೆ : ಬೆಳ್ತಂಗಡಿ ಯಲ್ಲಿ ಪೂರ್ವ ಸಮಾಲೋಚನಾ ಸಭೆ

Suddi Udaya

ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಮೂಡಾಯಿಬೆಟ್ಟು ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ

Suddi Udaya
error: Content is protected !!