ಬೆಳ್ತಂಗಡಿ:ಕರ್ನಾಟಕ ಸ್ಟೇಟ್ ಟೈಲರ್. ಅಸೋಸಿಯೇಷನ್ . ಬೆಳ್ತಂಗಡಿ ವಲಯ ಸಮಿತಿ ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕಿ ಪ್ರೇಮಲತಾ ಇವರನ್ನು ಸನ್ಮಾನಿಸಲಾಯಿತು.

ಇವರು ಪಡಂಗಡಿ ಶಾಲೆಯ ಶಿಕ್ಷಕಿಯಾಗಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಮುಖ್ಯ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಾ ಇದ್ದಾರೆ.
ಈ ಸಂದರ್ಭದಲ್ಲಿ ವಲಯ ಸಮಿತಿ ಅಧ್ಯಕ್ಷ ಸುರೇಂದ್ರ ಕೋಟ್ಯಾನ್ , ಜಿಲ್ಲಾ ಸಮಿತಿಯ ಸದಸ್ಯರಾದ ಶಾಂಭವಿ ಪಿ. ಬಂಗೇರ , ವಲಯ ಸಮಿತಿಯ ಮಾಜಿ ಅಧ್ಯಕ್ಷ ಹರೀಶ್ ಗಜಾನನ ಟೈಲರ್ ಉಪಸ್ಥಿತರಿದ್ದರು.
ತಾಲೂಕು ಸಮಿತಿಯ ಉಪಾಧ್ಯಕ್ಷ ವಸಂತ ಸ್ವಾತಿ ಸ್ವಗತಿಸಿದರು. ಕಾರ್ಯದರ್ಶಿ ಜಿ.ವಿ ಹರೀಶ್ ಸವಣಾಲು ಧನ್ಯವಾದ ಸಲ್ಲಿಸಿದರು.












