ಬೆಳ್ತಂಗಡಿ: ಮಾತೃಶ್ರೀ ಹೇಮಾವತಿರವರ ಕನಸಿನ ಕಾರ್ಯಕ್ರಮವಾದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ವಾತ್ಸಲ್ಯ ಕಾರ್ಯಕ್ರಮದ ಮೂಲಕ ಸಮಾಜದ ನಿರ್ಗತಿಕರನ್ನು ಗುರುತಿಸಿ ಅವರಿಗೆ ಪ್ರತಿ ತಿಂಗಳು ಮಾಸಾಶನವನ್ನು ನೀಡುವುದರ ಜೊತೆಗೆ ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದ್ದು ಮಕ್ಕಳ ವಿಧ್ಯಾಭ್ಯಾಸಕ್ಕೆ ಸಹಕಾರಿಯಾಗುವಂತೆ

ಶಾಲಾ ಪುಸ್ತಕ, ಬ್ಯಾಗ್, ಛತ್ರಿ, ಚಪ್ಪಲಿ, ಬಟ್ಟೆ ಹಾಗೂ ಇತ್ಯಾದಿ ವಸ್ತುಗಳನ್ನು ಒಳಗೊಂಡ ವಿಧ್ಯಾನಿಧಿ ಕಿಟ್ಟನ್ನು ನೀಡಿ ಮಕ್ಕಳು ಉತ್ತಮ ವಿಧ್ಯಾಭ್ಯಾಸವನ್ನು ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಬೇಕೆಂಬ ಆಶಯದೊಂದಿಗೆ ತಾಲೂಕಿನ 19 ವಿಧ್ಯಾರ್ಥಿಗಳಿಗೆ ವಾತ್ಸಲ್ಯ ವಿಧ್ಯಾನಿಧಿ ಕಿಟ್ ನ್ನು ಜಿಲ್ಲೆಯ ನಿರ್ದೇಶಕರಾದ ದಿನೇಶ್ ಡಿ ರವರು ಹಾಗೂ ತಾಲೂಕು ಯೋಜನಾಧಿಕಾರಿ ಯಶೋಧರ ವಿತರಿಸಿದರು.












