ಬೆಳ್ತಂಗಡಿ: ಸೋಜಾ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಸಂಸ್ಥೆಗೆ ಚಲನಚಿತ್ರ ನಿರ್ದೇಶಕರಾದ ಜಿ. ಕೃಷ್ಣ ಭಟ್ ಇವರು ಭೇಟಿ ನೀಡಿ ಸಿಬ್ಬಂದಿಗಳಿಗೆ ಜೀವನದಲ್ಲಿ ಅವಮಾನಗಳನ್ನು ಎದುರಿಸಿ, ಎಲ್ಲಾ ಕಷ್ಟಗಳನ್ನು ಮೆಟ್ಟಿ ನಿಂತರೆ ಮಾತ್ರ ನಾವು ನಮ್ಮ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳಬಹುದು ಎಂದು ಹಿತವಚನವನ್ನು ನೀಡಿದರು.
ಅವರೊಂದಿಗೆ ಪ್ರೊಫೆಷನಲ್ ಕೊರಿಯರ್ ನ ಮ್ಯಾನೇಜರ್ ಹಾಗೂ ಜಾದುಗಾರರಾಗಿರುವಂತಹ ಎಂ.ಎಸ್ ರಾಜು ಇವರು ಕೂಡ ಉಪಸ್ಥಿತರಿದ್ದು ಸಂಸ್ಥೆಗೆ ಬರುವ ಗ್ರಾಹಕರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ತನ್ನ ಜಾದುವಿನ ಮೂಲಕ ತಿಳಿಸಿದರು. ಹಾಗೂ ನಮ್ಮ ಜೀವನದಲ್ಲಿ ಕಷ್ಟ ಇದೆ ಎಂದು ಕುಗ್ಗದೆ, ನಮ್ಮಿಂದ ಎಲ್ಲಾ ಕೆಲಸವು ಸಾಧ್ಯವಿದೆಯೆಂದು ಮುನ್ನಡೆಯಬೇಕು ಎಂದು ಹೇಳಿದರು.
ಸಂಸ್ಥೆಯ ಸಿಬ್ಬಂದಿಗಳಾದ ಅರುಫಾ ಸುಹಾನ ಸ್ವಾಗತಿಸಿ, ಯಶೋಧರ ವಂದಿಸಿದರು. ಸಂಸ್ಥೆಯ ಮಾಲಕರಾದ ಅಲ್ಫೋನ್ಸ್ ಫ್ರಾಂಕೋರವರು ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.












