30.2 C
ಪುತ್ತೂರು, ಬೆಳ್ತಂಗಡಿ
September 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತೆಕ್ಕಾರು ಪ್ಯಾಕ್ಸ್ ಮಹಾಸಭೆ : ರೂ.126 ಕೋಟಿ ವ್ಯವಹಾರ, ರೂ.32.59 ಲಕ್ಷ ಲಾಭ  ಶೇ. 7% ಡಿವಿಂಡೆಡ್ :  ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್

ತೆಕ್ಕಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ 2025-26 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಅಬ್ಧುಲ್ ರಝಾಕ್ ಬಿ. ಅಧ್ಯಕ್ಷತೆಯಲ್ಲಿ ತೆಕ್ಕಾರು ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಸೆ. 12 ರಂದು ನಡೆಯಿತು.

ಸಂಘದ ಅಧ್ಯಕ್ಷ ಅಬ್ಧುಲ್ ರಝಾಕ್  ಬಿ. ಮಾತನಾಡಿ ಸಮಾನ ಮಾನಷ್ಕರ ನಮ್ಮ ಸಂಘವು 126 ಕೋಟಿ ರೂ. ವ್ಯವಹಾರ ನಡೆಸಿ, ರೂ. 32,59 ಲಕ್ಷ ರೂ. ಲಾಭಗಳಿಸಿ, ಲೆಕ ಪರಿಶೋಧನೆಯಲ್ಲಿ ಎ ಗ್ರೇಡ್ ಪಡೆದಿದ್ದು ಸದಸ್ಯರಿಗೆ ಶೇ. 7% ಡಿವಿಡೆಂಡ್ ನೀಡಲಾಗುವುದು ಎಂದು ಹೇಳಿದರು.

ನಮ್ಮ ಸಂಘದಲ್ಲಿ ವರದಿ ವರ್ಷಕ್ಕೆ 1237 ಜನ ಸದಸ್ಯರಿದ್ದು, ರೂ. 2,07,46,527.00 ಪಾಲು ಬಂಡವಾಳ ಸಂಗ್ರಹವಾಗಿದೆ. ಠೇವಣಾತಿ ಮೊತ್ತವು ರೂ. 12,52,58,840.26 ಆಗಿದ್ದು, ಸದಸ್ಯರ ಹೊರಬಾಕಿ ಸಾಲವು ರೂ. 29,88,57,843.00 ಆಗಿರುತ್ತದೆ. ನಮ್ಮ ಸಂಘದಲ್ಲಿ ಠೇವಣಿ ಇಡುವ ಸದಸ್ಯರ ಭದ್ರತೆಗೋಸ್ಕರ ಸಂಘದ ಲಾಭದಿಂದ ರೂ. 72,136.00 ಕಾದಿರಿಸಿದ್ದು, ಒಟ್ಟು 47,24.317.00 ಬಡ್ಡಿಯನ್ನು ಪ್ರತ್ಯೇಕವಾಗಿ ಕಾದಿರಿಸಿದೆ. ಸಂಘದ ಲಾಭದಲ್ಲಿ ರೂ. 10,36,527.00 ಸವಕಳಿ 2 . 2 ໖ 50,98,235.61 1 2 2 59,24,362.81 ಕ್ಷೇಮ ನಿಧಿಗಳಿವೆ ಎಂದು ತಿಳಿಸಿದರು.

ಉಪಾಧ್ಯಕ್ಷ ಶೇಖರ ಪೂಜಾರಿ, ನಿದೇರ್ಶಕರಾದ ಅಅಬ್ದುಲ್  ರಹಿಮಾನ್, ಅಬ್ದುಲ್ ಮುನೀರ್, ಎಸ್. ಬಿ. ಇಬ್ರಾಹಿಂ, ಕೃಷ್ಣಪ್ಪ ಮೂಲ್ಯ, ರವಿ, ವಸಂತಿ, ರಾಜೇಶ್ವರಿ ರಮೇಶ್, ಜಿನತ್ ಮತ್ತು ವಲಯ ಮೇಲ್ವಿಚಾರಕ ಸಿರಾಜುದ್ದಿನ್ ಉಪಸ್ಥಿತರಿದ್ದರು.

ಐದು ಮಂದಿಗೆ ಸೌಭಾಗ್ಯ ನಿಧಿ ಠೇವಣಿಯನ್ನು  ವಿತರಿಸಲಾಯಿತು.ವಿವಿಧ ಕ್ಷೇತ್ರದ ಸಾಧಕರಿಗೆ, ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಿಧನರಾದ ಸಂಘದ ಸದಸ್ಯರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಮುಖ್ಯ ಕಾರ್ಯನಿರ್ವಾಹಧಿಕಾರಿ ರಾಘವೇಂದ್ರ ಅಡಪ ವರದಿ ವಾಚಿಸಿ, ನಿರ್ದೇಶಕರಾದ ಇನಾಸ್ ರೋಡ್ರಿಗಸ್ ಸ್ವಾಗತಿಸಿ, ಸತೀಶ್ ಪೂಜಾರಿ ಬಿ. ನಿರೂಪಿಸಿದರು. ಸಿಬ್ಬಂದಿ ನಮಿತಾ ವಂದಿಸಿದರು. ಸಿಬ್ಬಂದಿಗಳಾದ ಪ್ರೇಮಾ, ನವೀಶ, ಶಾಹಿದಾ ಬಾನು, ನಿಕ್ಷಿತ್, ರತ್ನ ಸಹಕರಿಸಿದರು.

Related posts

ಅಕ್ಟೋಬರ್ 2ರಂದು ಬೆಳ್ತಂಗಡಿಯಲ್ಲಿ ತಾಲೂಕು ಮಟ್ಟದ ಗಾಂಧಿ ಜಯಂತಿ ಆಚರಣೆಗೆ ನಿರ್ಧಾರ: ತಾ. ಜನಜಾಗೃತಿ ವೇದಿಕೆ ಸಭೆ

Suddi Udaya

ಅಳದಂಗಡಿ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ

Suddi Udaya

ಕೊಯ್ಯೂರು: ಅಕ್ರಮವಾಗಿ ಮದ್ಯ ಮಾರಾಟ: ಬೆಳ್ತಂಗಡಿ ಪೊಲೀಸರಿಂದ ದಾಳಿ

Suddi Udaya

ಸರಣಿ ಕಳ್ಳತನಗೈಯ್ಯುತ್ತಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ: ಕಾರ್ಕಳ ತಾಲೂಕು ನಿಟ್ಟೆ ಅಜ್ಜೊಟ್ಟು ನಿವಾಸಿ ಸುರೇಶ ಕೆ ಪೂಜಾರಿ ಬಂಧಿತ ಆರೋಪಿ

Suddi Udaya

ಮೂರನೇ ದಿನದ ಕಾರ್ಯಾಚರಣೆಗೆ ಎಸ್.ಐ.ಟಿ ಅಧಿಕಾರಿಗಳ ಜೊತೆ ನೇತ್ರಾವತಿಗೆ ಬಂದ ದೂರುದಾರ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪತ್ತನಾಜೆ: ವಿಶೇಷ ಸೇವೆ, ಉತ್ಸವಗಳಿಗೆ ತೆರೆ 

Suddi Udaya
error: Content is protected !!