30.2 C
ಪುತ್ತೂರು, ಬೆಳ್ತಂಗಡಿ
September 12, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಡಂತ್ಯಾರು: ರಾಜ್ಯಕ್ಕೆ ಕೀರ್ತಿ ತಂದುಕೊಟ್ಟ ಸೇಕ್ರೆಡ್ ಹಾರ್ಟ್ ಕಾಲೇಜಿನ ಎನ್ ಸಿ ಸಿ ಕೆಡೆಟ್: ರಾಷ್ಟ್ರಮಟ್ಟದ ಎನ್.ಸಿ.ಸಿ ಶಿಬಿರಕ್ಕೆ ಜೂನಿಯರ್ ಅಂಡರ್ ಆಫೀಸರ್ ಮಂಜುಷಾ ಆಯ್ಕೆ

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜು, ಮಡಂತ್ಯಾರಿನ ಎನ್.ಸಿ.ಸಿ. ಆರ್ಮಿ ವಿಂಗ್‌ನ ಜೂನಿಯರ್ ಅಂಡರ್ ಆಫೀಸರ್ (JUO) ಮಂಜುಷಾ ಎ. ಜೆ. ಅವರು 18 KAR BN NCC ಘಟಕದ ವತಿಯಿಂದ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಎನ್.ಸಿಸಿ ಶಿಬಿರ–2026ಕ್ಕೆ ಫೈರಿಂಗ್ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.

ಎನ್.ಸಿ.ಸಿ. ತರಬೇತಿಯಲ್ಲಿ ತೋರಿದ ಶಿಸ್ತು, ಸಮರ್ಪಣೆ, ದೃಢಸಂಕಲ್ಪ ಹಾಗೂ ಕೌಶಲ್ಯದ ಫಲವಾಗಿ ಈ ಪ್ರತಿಷ್ಠಿತ ಶಿಬಿರಕ್ಕೆ ಆಯ್ಕೆಯಾಗಿರುವುದು ಕಾಲೇಜು ಹಾಗೂ ಎನ್.ಸಿ.ಸಿ. ಘಟಕಕ್ಕೆ ಹೆಮ್ಮೆಯ ವಿಷಯವಾಗಿದೆ.

ರಾಷ್ಟ್ರಮಟ್ಟದಲ್ಲಿ ಕಾಲೇಜು ಹಾಗೂ ಎನ್.ಸಿ.ಸಿ.ಯನ್ನು ಪ್ರತಿನಿಧಿಸಲಿರುವ ಜೂನಿಯರ್ ಅಂಡರ್ ಆಫೀಸರ್ ಮಂಜುಷಾ ಅವರ ಸಾಧನೆಯು ಇತರ ಕೆಡೆಟ್‌ಗಳಿಗೆ ಪ್ರೇರಣೆಯಾಗಿದೆ. ಅವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಎನ್.ಸಿ.ಸಿ. ಘಟಕ ಅಭಿನಂದನೆ ಸಲ್ಲಿಸಿ, ಶಿಬಿರದಲ್ಲಿ ಯಶಸ್ಸು ಸಾಧಿಸುವಂತೆ ಶುಭ ಹಾರೈಸಿದೆ.

Related posts

ಮಿತ್ತಬಾಗಿಲು ಸರಕಾರಿ ಪ್ರೌಢಶಾಲೆಗೆ ‘ಎ’ ಗ್ರೇಡ್ ನೊಂದಿಗೆ ಶೇ.100 ಫಲಿತಾಂಶ

Suddi Udaya

ಅನಾರು ಹಾ.ಉ.ಸ. ಸಂಘದ ನೂತನ ಕಟ್ಟಡ “ಕ್ಷೀರ ವಾರಿಧಿಯ” ಉದ್ಘಾಟನೆ

Suddi Udaya

ವಾಣಿ ಪ.ಪೂ. ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

Suddi Udaya

ಗೇರುಕಟ್ಟೆ ಬಾಲಕನ ಅಸಹಜ ಸಾವು: ವಿ.ಹಿಂ.ಪ ದಿಂದ ನಾಳ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ

Suddi Udaya

ಗಿರೀಶ್ ಮಟ್ಟಣ್ಣನವರ್ ಆಕ್ಷೇಪಾರ್ಹ ಹೇಳಿಕೆ: ಮೂರು ವಾರಗಳಲ್ಲಿ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗಕ್ಕೆ  ಹೈಕೋರ್ಟ್ ಸೂಚನೆ

Suddi Udaya

ಬೀಡಿ ಬ್ರಾಂಚ್ ನ ಕಟ್ಟಡದ ಅಡ್ಡಕ್ಕೆ ವ್ಯಕ್ತಿ ನೇಣು ಹಾಕಿಕೊಂಡು ಆತ್ಮಹತ್ಯೆ

Suddi Udaya
error: Content is protected !!