
ಶಿಶಿಲ: ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಜಿನಮಂದಿರದಲ್ಲಿ ಶ್ರಾವಣ ಶುಕ್ರವಾರದ ವಿಶೇಷ ಪೂಜೆಗಳು. ಪರಮ ಪೂಜ್ಯ ಸಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ ಶ್ರೀ ಜೈನ ಮಠ ಕಾರ್ಕಳ . ಇವರ ಶುಭಾಶೀರ್ವಾದಗಳೊಂದಿಗೆ

ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಶ್ರೀ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದೊಂದಿಗೆ ಶ್ರೀ ಕ್ಷೇತ್ರ ಚಂದ್ರಪುರದ ಭಗವಾನ್ ೧೦೦೮ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಶ್ರಾವಣ ಶುಕ್ರವಾರದ ವಿಶೇಷ ಪೂಜೆಯ ಪ್ರಯುಕ್ತ ಭಗವಂತರಿಗೆ ಶ್ರೀಗಂಧ ಎಳನೀರು ಹಾಲು ,ಚಂದನ..ಮುಂತಾದ ದೃವ್ಯಗಳಿಂದ ಅಭಿಷೇಕ.. ಕ್ಷೇತ್ರದ ಮಹಾಮಾತೆ. ಶ್ರೀ ಪದ್ಮಾವತಿ

ಅಮ್ಮನವರಿಗೆ 25 ಬಗೆಯ ವಿಶೇಷ ಕಜ್ಜಾಯಗಳ ಸಮರ್ಪಣೆ. ಸಾಮೂಹಿಕ ಕುಂಕುಮಾರ್ಚನೆ ಮುಂತಾದ ಪೂಜೆಗಳು. ವಿಜೃಂಭಣೆಯಿಂದ ನೆರವೇರಿದವು ಪೂಜಾ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯವರು ಹಾಗೂ ಶಿಶುಗಲಿ ರಾಣಿ ಕಾಳಲಾ ದೇವಿ ಜೈನ ಮಹಿಳಾ ಸಮಾಜದ ಸದಸ್ಯರು ಹಾಗೂ ಊರ ಪರ ಊರ ಶ್ರಾವಕ ಶ್ರಾವಿಕೆಯರು ಬಹು ಸಂಖ್ಯೆಯಲ್ಲಿ ಭಾಗವಹಿಸಿದ್ದರು.













