ಮಚ್ಚಿನ : ಪ್ರಧಾನಿ ನರೇಂದ್ರ ಮೋದಿ ಯವರ ಹುಟ್ಟು ಹಬ್ಬದ ಪ್ರಯುಕ್ತ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವರಿಗೆ ಕಾರ್ತಿಕ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಲಾಯಿತು

ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಹರ್ಷ ಸಂಪಿಗೆತ್ತಾಯ ಹಾಗೂ ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಶ್ರೀಮತಿ ವಸಂತಿ ಲಕ್ಷ್ಮಣ್ , ಕುವೆಟ್ಟು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಮಚ್ಚಿನ ಶಕ್ತಿ ಕೇಂದ್ರ ಅಧ್ಯಕ್ಷ ನಾರಾಯಣ ಶೆಟ್ಟಿ ನೆತ್ತರ , ಬೂತ್ ಅಧ್ಯಕ್ಷರುಗಳಾದ ವಿಜಯ್ ಮಡಕ್ಕಿಲ, ರಮೇಶ್ ಕೊಡ್ಯೇಲು, ನೊಣಯ್ಯ, ಸುಕುಮಾರ್ , ಜಯಶ್ರೀ ಮಚ್ಚಿನ ಚೇತನ ಪಲ್ಲತಳ, ಶ್ಯಾಮ್ ಸುಂದರ್, ಚಿತ್ತರಂಜನ ಕುರುಡಂಗೆ, ವಿಶ್ವ ಹಿಂದೂ ಪರಿಷತ್ತಿನ ಪ್ರಭಾಕರ ಮುದಲಡ್ಕ, ಪುರಂದರ ಶೆಟ್ಟಿ ನೆತ್ತರ ಹಾಗೂ ಪ್ರಮುಖರು, ಮೋದಿಜೀ ಅಭಿಮಾನಿಗಳು, ಭಕ್ತಭಿಮಾನಿಗಳು ಮತ್ತಿತರರು ಉಪಸ್ಥಿತರಿದ್ದರು.











