ಬೆಳಾಲು : ದೇಶದ ಪ್ರಧಾನಿ ನರೇಂದ್ರ ಮೋದಿಜಿಯವರ ಜನ್ಮ ದಿನ ಆಚರಣೆಯ ಸಲುವಾಗಿ ಬೆಳಾಲು ಶ್ರೀ ಮಾಯಾ ಮಹಾದೇವ, ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಲಾಯಿತು. ನಂತರ ವಿಕಸಿತಾ ಭಾರತದ ಸಂಕಲ್ಪ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡ ಉಪಾಧ್ಯಕ್ಷ ವೆಂಕಟೇಶ್ ಬೆಳಾಲು, ಶಕ್ತಿ ಕೇಂದ್ರ ಪ್ರಮುಖ ಮಾದವ ಗೌಡ, ಮಹಾಶಕ್ತಿ ಕೇಂದ್ರ ಪ್ರಮುಖ ಸುರೇಂದ್ರ ಗೌಡ, ಹಾಲು ಸೊಸೈಟಿ ನಿರ್ದೇಶಕರು ರೋಹಿತ್ ಆಚಾರ್ಯ, 199 ಬೂತ್ ಅಧ್ಯಕ್ಷರು ರಮಿತ್ ಗೌಡ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಕೃಷ್ಣಾಯ್ಯ ಆಚಾರ್ಯ, ಜಿಲ್ಲಾ ಮನ್ ಕೀ ಬಾತ್ ಸಂಯೋಜಕ ಸೀತಾರಾಮ್, ಕಾರ್ಯಕರ್ತರು ಉಪಸ್ಥಿತರಿದ್ದರು.











