30.4 C
ಪುತ್ತೂರು, ಬೆಳ್ತಂಗಡಿ
September 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಕರಾಡ ಬ್ರಾಹ್ಮಣ ಸಮಾಜದಿಂದ ಸಾಮೂಹಿಕ ಹರಿತಾಲಿಕ(ಗೌರಿ) ಪೂಜೆ

ಬೆಳ್ತಂಗಡಿ : ಕರಾಡ ಬ್ರಾಹ್ಮಣ ಸಮಾಜ ಹಾಗೂ ಕರಾಡ ಮಹಿಳಾ ವೇದಿಕೆ ಬೆಳ್ತಂಗಡಿ ತಾಲೂಕು ಇದರ ನೇತೃತ್ವದಲ್ಲಿ ಸೋಮಂತಡ್ಕದಲ್ಲಿರುವ ಸಮೃದ್ಧಿ ಕರಾಡ ಭವನದಲ್ಲಿ ಪ್ರತಿ ವರ್ಷದಂತೆ ಸಾಮೂಹಿಕವಾಗಿ ಹರಿತಾಲಿಕ ಪೂಜೆಯು ಇತ್ತೀಚೆಗೆ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಮಹಿಳೆಯರನ್ನು ಗುರುತಿಸಿ ಅವರ ಪ್ರತಿಭೆ ಯನ್ನು ಬೆಳಕಿಗೆ ತರುವಲ್ಲಿ ಶ್ರಮವಹಿಸಿದ ಸುಜಾತ ಜಿ ಭಟ್ ಇವರನ್ನು ಗೌರವಿಸಲಾಯಿತು. ಮುಖ್ಯ ಅಭ್ಯಾಗತರಾದ ಶ್ರೀಮತಿ ಶಾಂತಾ ನಾಗರಾಜ್ ಗೌರಿ ಪೂಜೆ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾದ ಶ್ರೀಮತಿ ಅಕ್ಷತಾ ಹೆಬ್ಬಾರ್, ಮಮತಾ ಬಿಲ್ಲರೋಡಿ, ಜಯಾ ಅನಂತ ಕೃಷ್ಣ, ಶ್ರೀಮತಿ ಸಂತೋಷಿನಿ ಶುಭ ಹಾರೈಸಿದರು.

ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ವಿಜಯ ವಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವೇದಿಕೆ ಕಾರ್ಯದರ್ಶಿ ಸುಜಾತ ಜಿ ಭಟ್ ಸ್ವಾಗತಿಸಿದರು. ಮಹಿಳಾ ವೇದಿಕೆ ಸದಸ್ಯೆ ಶ್ರೀಮತಿ ಮಮತಾ ವಿ ಭಟ್ ವಂದಿಸಿದರು.

Related posts

ಕಳಿಯ ಸಹಕಾರಿ ಸಂಘದ ನೂತನ ಗೋದಾಮು ಕಟ್ಟಡ ಉದ್ಘಾಟನೆ: ರೈತಾಪಿ ಸದಸ್ಯರಿಗೆ ಉಚಿತ ಮೈಲುತುತ್ತು ವಿತರಣೆ: ಶಾಸಕ ಹರೀಶ್ ಪೂಂಜ ಮತ್ತು ಡಾ. ಎಂ.ಎನ್ ರಾಜೇಂದ್ರ ಕುಮಾರ್ ರವರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಆಳ್ವಾಸ್‌ನಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ‘ಖೇಲ್ ಕೂದ್ ಮಹೋತ್ಸವ’

Suddi Udaya

ಕಲ್ಲೇರಿ ಎಟಿಎಂ ಕೇಂದ್ರಕ್ಕೆ ನುಗ್ಗಿದ ಖದೀಮರು, ಕಳ್ಳತನಕ್ಕೆ ಯತ್ನ ಸೊತ್ತುಗಳಿಗೆ ಹಾನಿ

Suddi Udaya

ಇಂದಬೆಟ್ಟು: ಬಂಗಾಡಿ ಅರಮನೆಗೆ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಭೇಟಿ

Suddi Udaya

ಲಾಯಿಲ ಗಾಂಧಿನಗರದಲ್ಲಿ ನಡೆದ ಕೊಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ರೂ 3 ಲಕ್ಷ ದಂಡ

Suddi Udaya

ಬೊಳ್ಳಜ್ಜ ದೈವದ ಮೂಲಸ್ಥಾನದಲ್ಲಿ ಸಾರ್ವಜನಿಕರಿಂದ ಅಗೇಲು ಸೇವೆ: ಶ್ರದ್ಧಾ ಭಕ್ತಿಯಿಂದ ಸಹಸ್ರಾರು ಭಕ್ತರಿಂದ ಬೊಳ್ಳಜ್ಜನಿಗೆ ಅಗೇಲು ಸಮರ್ಪಣೆ

Suddi Udaya
error: Content is protected !!