ಬೆಳ್ತಂಗಡಿ : ಕರಾಡ ಬ್ರಾಹ್ಮಣ ಸಮಾಜ ಹಾಗೂ ಕರಾಡ ಮಹಿಳಾ ವೇದಿಕೆ ಬೆಳ್ತಂಗಡಿ ತಾಲೂಕು ಇದರ ನೇತೃತ್ವದಲ್ಲಿ ಸೋಮಂತಡ್ಕದಲ್ಲಿರುವ ಸಮೃದ್ಧಿ ಕರಾಡ ಭವನದಲ್ಲಿ ಪ್ರತಿ ವರ್ಷದಂತೆ ಸಾಮೂಹಿಕವಾಗಿ ಹರಿತಾಲಿಕ ಪೂಜೆಯು ಇತ್ತೀಚೆಗೆ ನಡೆಯಿತು.

ಸಭಾ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಮಹಿಳೆಯರನ್ನು ಗುರುತಿಸಿ ಅವರ ಪ್ರತಿಭೆ ಯನ್ನು ಬೆಳಕಿಗೆ ತರುವಲ್ಲಿ ಶ್ರಮವಹಿಸಿದ ಸುಜಾತ ಜಿ ಭಟ್ ಇವರನ್ನು ಗೌರವಿಸಲಾಯಿತು. ಮುಖ್ಯ ಅಭ್ಯಾಗತರಾದ ಶ್ರೀಮತಿ ಶಾಂತಾ ನಾಗರಾಜ್ ಗೌರಿ ಪೂಜೆ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾದ ಶ್ರೀಮತಿ ಅಕ್ಷತಾ ಹೆಬ್ಬಾರ್, ಮಮತಾ ಬಿಲ್ಲರೋಡಿ, ಜಯಾ ಅನಂತ ಕೃಷ್ಣ, ಶ್ರೀಮತಿ ಸಂತೋಷಿನಿ ಶುಭ ಹಾರೈಸಿದರು.
ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ವಿಜಯ ವಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವೇದಿಕೆ ಕಾರ್ಯದರ್ಶಿ ಸುಜಾತ ಜಿ ಭಟ್ ಸ್ವಾಗತಿಸಿದರು. ಮಹಿಳಾ ವೇದಿಕೆ ಸದಸ್ಯೆ ಶ್ರೀಮತಿ ಮಮತಾ ವಿ ಭಟ್ ವಂದಿಸಿದರು.











