September 6, 2026
ಕೃಷಿತಾಲೂಕು ಸುದ್ದಿ

ಪದ್ಮಂಜ ಸಹಕಾರಿ ಸಂಘದ ರೈತ ಭವನ ಮತ್ತು ರೈತ ಗೋದಾಮು ಕಟ್ಟಡ ಉದ್ಘಾಟನೆ

ಬೆಳ್ತಂಗಡಿ: ಪದ್ಮಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಪದ್ಮಂಜದಲ್ಲಿ ನಿರ್ಮಿಸಲಾಗಿರುವ ರೈತ ಸಭಾಭವನ ಹಾಗೂ ರೈತ ಗೋದಾಮ ಕಟ್ಟಡದ ಉದ್ಘಾಟನಾ ಸಮಾರಂಭ ಮಾ.2ರಂದು ರೈತ ಸಭಾಭವನ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ. ರೈತ ಗೋದಮು ಕಟ್ಟಡ ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕರಾದ ಕೆ ಪ್ರತಾಪ್ ಸಿಂಹ ನಾಯಕ್.ಕ್ಯಾಂಪ್ಕೋ ಬ್ರಾಂಚ್ ಉದ್ಘಾಟನೆಯನ್ನು ವಿಧಾನ ಪರಿಷತ್ ಶಾಸಕರಾದ ಕೆ ಹರೀಶ್ ಕುಮಾರ್. ನವಿಕೃತ ಪ್ರಧಾನ ಕಛೇರಿ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಧರ್ಮಸ್ಥಳದ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಾ. ಎಲ್ ಎಚ್ ಮಂಜುನಾಥ್.ಮೀಟಿಂಗ್ ಹಾಲ್ ಉದ್ಘಾಟನೆಯನ್ನು.ಮಂಗಳೂರು ಡಿ.ಸಿ.ಸಿ ಬ್ಯಾಂಕ್. ನಿರ್ದೇಶಕರಾದ ನಿರಂಜನ್ ಬಾವಂತಬೆಟ್ಟು.ಕೃಷಿ ಯಂತ್ರ ಮೇಳ ಉದ್ಘಾಟನೆಯನ್ನು ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ.ಬಲ್ಯೊಟ್ಟು ಹಾಗೂ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ರಕ್ಷಿತ್ ಪಣೆಕ್ಕಾರ ಹೇಳಿದರು

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ.ಪದ್ಮು೦ಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 1976 ರಲ್ಲಿ ಪ್ರಾರಂಭಗೊಂಡು ಕಣಿಯೂರು, ಬಂದಾರು, ಮೊಗ್ರು ಈ ಮೂರು ಗ್ರಾಮಗಳ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ನಮ್ಮ ಸಹಕಾರಿ ಸಂಘದ ಮೂಲಕ ಗ್ರಾಮದ ರೈತರ ಕೃಷಿ ಅಭಿವೃದ್ಧಿಗೆ ಪೂರಕವಾಗಿ ಅನೇಕ ಸೌಲಭ್ಯಗಳನ್ನು ನೀಡುವ ಮೂಲಕ ರೈತರ ಪರವಾಗಿ ಕೆಲಸ ಕಾರ್ಯಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಪ್ರಸ್ತುತ ನಮ್ಮ ಸಂಘವು ಸುಮಾರು 3680 ಸದಸ್ಯರನ್ನು ಒಳಗೊಂಡಿದೆ.

ಸಂಘವು ಪದ್ಮುಂಜ ಪರಿಸರದಲ್ಲಿ ಸುಸಜ್ಜಿತವಾದ ಸ್ವಂತ ಕಟ್ಟಡವನ್ನು ಹೊಂದಿದೆ. ಹಾಗೂ ಬಂದಾರು ಗ್ರಾಮದಲ್ಲಿ ಶಾಖಾ ಕಟ್ಟಡವನ್ನು ಹೊಂದಿರುತ್ತದೆ. ಸಂಘದಲ್ಲಿ ಒಟ್ಟು 18 ಕೋಟಿ ಠೇವಣಿ ಇರುತ್ತದೆ, ಸಂಘದ ಮೂಲಕ ರೈತರಿಗೆ ಕೃಷಿ ಮತ್ತು ಇತರ ಉದ್ದೇಶಕ್ಕಾಗಿ 69 ಕೋಟಿ ಸಾಲವನ್ನು ವಿತರಿಸಲಾಗಿದೆ. ವಾರ್ಷಿಕ 290 ಕೋಟಿ ವಹಿವಾಟು ನಡೆಸಿ ಕಳೆದ ವರ್ಷ 1 ಕೋಟಿ 3 ಲಕ್ಷ ಲಾಭವನ್ನು ಗಳಿಸಿರುತ್ತದೆ. ಸಂಘದ ಮೂಲಕ ಮೂರು ಗ್ರಾಮದ ಜನರಿಗೆ ಪಡಿತರ ವಿತರಣೆ, ರಾಸಾಯನಿಕ ಗೊಬ್ಬರ ಪೂರೈಕೆ, ಕೃಷಿ ಉಪಕರಣ ಇತ್ಯಾದಿಗಳನ್ನು ನಿರಂತರವಾಗಿ ಪೂರೈಸಿಕೊಂಡು ಬಂದಿದೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅಶೋಕ್ ಗೌಡ ಪಾಂಜಾಳ, ನಿದೇಶಕರುಗಳಾದ ರಾಮಣ್ಣ ಮಡಿವಾಳ, ಉದಯ ಕುಮಾರ್, ಶೀಲಾವತಿ ಉಪಸ್ಥಿತರಿದ್ದರು.

Related posts

ಸಚಿವ ವಿ.ಸೋಮಣ್ಣರವನ್ನು ಭೇಟಿಯಾದ ಜಿ.ಪಂ. ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ: ಮಂಗಳೂರು ನಿಂದ ಬೆಂಗಳೂರು ನೇರ ರೈಲು ಒದಗಿಸುವಂತೆ ಮನವಿ

Suddi Udaya

ಕಳಿಯ ನ್ಯಾಯತರ್ಪು ಗ್ರಾಮದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ

Suddi Udaya

ಧರ್ಮಸ್ಥಳ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜಯಂತಿ ಆಚರಣೆ

Suddi Udaya

ಆಮಂತ್ರಣ ರಾಜ್ಯ ಸಮಿತಿಗೆ ಸದಸ್ಯರಾಗಿ ಹೆಚ್.ಕೆ ನಯನಾಡು ಆಯ್ಕೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಬಹುಮಾನ

Suddi Udaya

ಗುಂಡೂರಿ: ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ

Suddi Udaya
error: Content is protected !!