September 6, 2026
ಅಪರಾಧ ಸುದ್ದಿ

ಕಡಿರುದ್ಯಾವರ ಎಮಾ೯ಲ್ ಪಲ್ಕೆಯಲ್ಲಿ ಆಕಸ್ಮಿಕ ವಾಗಿ ಕೈಜಾರಿ ಬಾವಿಗೆ ಬಿದ್ದು ಮೃತಪಟ್ಟ ಬೆಳಗಾವಿ ನಿವಾಸಿ ಪ್ರವೀಣ್ ಎಂಬವರ ವಾರಿಸುದಾರರ ಪತ್ತೆಗೆ ಪೊಲೀಸರ ಮನವಿ

ಕಡಿರುದ್ಯಾವರ: ಇಲ್ಲಿಯ ಎಮಾ೯ಲ್ ಪಲ್ಕೆಯಲ್ಲಿ ಬಾವಿಗೆ ಬಿದ್ದ ಕೊಡಪಾನ ತೆಗೆಯುತ್ತಿದ್ದ ವೇಳೆ ಆಕಸ್ಮಿಕ ವಾಗಿ ಕೈಜಾರಿ ಬಾವಿಗೆ ಬಿದ್ದ ಬೆಳಗಾವಿ ನಿವಾಸಿ ಎನ್ನಲಾದ ಪ್ರವೀಣ್ ( 35 ವರ್ಷ) ಎಂಬವರ
ವಾರಿಸುದಾರರ ಪತ್ತೆಗಾಗಿ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರವೀಣ್ ಸುಮಾರು 2 ವರ್ಷಗಳಿಂದ ಸುಮಿತ್ರಾ ಎಂಬವರ ಮನೆಯಲ್ಲಿ ವಾಸವಾಗಿದ್ದು , ಮಾ. 15 ರಂದು ಕೆಲಸಕ್ಕೆ ರಜೆ ಇದ್ದ ಕಾರಣ ಪ್ರವೀಣ್ ರವರು ದೇವರಾಜುರನ್ನು ಕರೆದು ಮನೆಯ ಬಳಿ ಇರುವ ಸರಕಾರಿ ಬಾವಿಗೆ ಮನೆಯ ಕೊಡಪಾನ ಬಿದ್ದಿದೆ. ತೆಗೆಯಲು ಬಾ ಎಂದು ಕರೆದಿದ್ದು, ದೇವರಾಜ್ ಹಾಗೂ ಪ್ರವೀಣ್ ರವರು ಜೊತೆಯಾಗಿ ಬಾವಿಯ ಬಳಿ ಹೋಗಿ ಪ್ರವೀಣ್ ರವರು ಹಗ್ಗದ ಸಹಾಯದಿಂದ ಬಾವಿಗೆ ಇಳಿದು ಕೊಡಪಾನವನ್ನು ಮೇಲಕ್ಕೆ ತರುವ ಸಮಯ ಒಮ್ಮಲೆ ಕೈ ಜಾರಿ ಆಕಸ್ಮಿಕವಾಗಿ ಬಾವಿಯ ನೀರಿಗೆ ಬಿದ್ದರೆನ್ನಲಾಗಿದೆ. ಕೂಡಲೇ
ನೆರೆಕರೆಯವರ ಸಹಾಯದಿಂದ ಅಗ್ನಿ ಶಾಮಕ ದಳದವರನ್ನು ಕರೆಸಿ ಅವರನ್ನು ಮೇಲಕ್ಕೆತ್ತಿಸಿ ನೋಡಿದಾಗ ಪ್ರವೀಣ್ ರವರು ಮೃತಪಟ್ಟಿದ್ದರು. ಬೆಳ್ತಂಗಡಿ ಪೊಲೀಸ್ ಠಾಣಾ ಯುಡಿಆರ್ ನಂ: 11/2023 ಕಲಂ: 174 ಸಿಆರ್‌ಪಿಸಿ ರಂತೆ ಪ್ರಕರಣ ದಾಖಲಾಗಿದೆ.
ಮಂಗಳೂರು ಆಸ್ಪತ್ರೆಗೆ ಮೃತ ದೇಹ :
ಮೃತ ದೇಹದ ವಾರಿಸುದಾರರ ಪತ್ತೆಗಾಗಿ ಮೃತ ದೇಹವನ್ನು ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಯ (ಶಿಥಿಲೀಕರಣ) ಶವಾಗಾರದಲ್ಲಿರಿಸಲಾಗಿದೆ.
ಪತ್ತೆಗೆ ಮನವಿ :
ಸದರಿ ಮೃತ ಬೆಳಗಾವಿ ನಿವಾಸಿ ಎನ್ನಲಾದ ಪ್ರವೀಣ್ ಪ್ರಾಯ ಸುಮಾರು 35 ವರ್ಷ ಎಂಬವರ ಬಗ್ಗೆ ಮಾಹಿತಿ ದೊರೆತಲ್ಲಿ ಕೂಡಲೇ ಪೊಲೀಸು ನಿರೀಕ್ಷಕರು ಬೆಳ್ತಂಗಡಿ ಮೊಬೈಲ್: 9480805370, ಬೆಳ್ತಂಗಡಿ ಪೊಲೀಸ್ ಠಾಣೆ ದೂ: 08256-232093 ಅಥವಾ ದ.ಕ ಜಿಲ್ಲಾ ಕಂಟ್ರೋಲ್ ರೂಂ: 9480805300 ಕ್ಕೆ ಕರೆ ಮಾಡಿ ತಿಳಿಸಬೇಕಾಗಿ ಕೋರಲಾಗಿದೆ.
ಮೃತ ವ್ಯಕ್ತಿಯ ಚಹರೆ:
ಸಾದಾ ಸಪೂರ ಶರೀರ, ಗೋಧಿ ಮೈಬಣ್ಣ, ಎಡ ಕೈ ಗಂಟಿನ ಒಳ ತಟ್ಟಿನಲ್ಲಿ ಕಪ್ಪು ಮಚ್ಚೆ, ಸುಮಾರು 8 ಇಂಚು ಉದ್ದದ ತಲೆ ಕೂದಲು, ತೆಳು ಮೀಸೆ ಹಾಗೂ ಗಡ್ಡ ಬಿಟ್ಟಿರುತ್ತಾರೆ ಎಂದು ಪೊಲೀಸರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts

ಪುದುವೆಟ್ಟು: ಹೊಳೆಗೆ‌ ಸ್ನಾನಕ್ಕೆ ಹೋದ ವ್ಯಕ್ತಿ ನಾಪತ್ತೆ

Suddi Udaya

ಮೃತದೇಹ ಹೂತು ಹಾಕಿದ ಪ್ರಕರಣ ಮೊದಲು ಗುರುತಿಸಿದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದರು ಇನ್ನೂ ಪತ್ತೆಯಾಗದ ಕಳೇಬರ ಕಾರ್ಯಾಚರಣೆಗೆ ಶ್ವಾನ ದಳ ಎಂಟ್ರಿ

Suddi Udaya

ಗುರುವಾಯನಕೆರೆ: ಗಲಾಟೆ ವಿಚಾರದಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು: ಲೋನ್ ಪೈಲ್ ವಿಚಾರದಲ್ಲಿ ಮಹಿಳಾ ಸಿಬ್ಬಂದಿಯೊಂದಿಗೆ ಮಾತುಕತೆ, ಸಂಸ್ಥೆಯ ಮಾಲಕನಿಂದ ಹಲ್ಲೆ

Suddi Udaya

ಕರ್ತವ್ಯದ ವೇಳೆ ಬೆಳ್ತಂಗಡಿ ತಹಶೀಲ್ದಾ‌ರ್ ಮೇಲೆ ಹಲ್ಲೆಗೆ ಯತ್ನ: ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಅಕ್ರಮ ಇಸ್ಪೀಟ್ ಅಡ್ಡೆಗೆ ಪೊಲೀಸ್ ದಾಳಿ : ರೂ. 54 ಸಾವಿರ ನಗದು ಸಹಿತ 37 ಮಂದಿ ವಶ

Suddi Udaya

ಗುರುವಾಯನಕೆರೆ ಅಂಗಡಿಯ ಬ್ಯಾನರ್ ಗೆ ಬೆಂಕಿ ಆರೋಪಿಯನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya
error: Content is protected !!