ಗ್ರಾಮಾಂತರ ಸುದ್ದಿತಾಲೂಕು ಸುದ್ದಿ

ಕರಾಡ ಬ್ರಾಹ್ಮಣ ಸಮಾಜದಿಂದ ಸಂಸ್ಕರಣೆ ಹಾಗೂ ನುಡಿನಮನ ಕಾರ್ಯಕ್ರಮ

ಬೆಳ್ತಂಗಡಿ:ಕೀರ್ತಿಶೇಷ ಬಲಿಪ ನಾರಾಯಣ ಭಾಗವತರು ಹಾಗೂ ಕೀರ್ತಿಶೇಷ ವಿಜಯ‌ರಾಘವ ಪಡ್ವೆಟ್ನಾಯರ ಸಂಸ್ಮರಣೆ ಹಾಗೂ ನುಡಿನಮನ ಕಾರ್ಯಕ್ರಮವನ್ನು “ಸಮೃದ್ಧಿ” ಕರಾಡ ಭವನ ಸೋಮಂತಡ್ಕದಲ್ಲಿ ಕರಾಡ ಬ್ರಾಹ್ಮಣ‌ ಸಮಾಜ (ರಿ),ಬೆಳ್ತಂಗಡಿ ಇದರ ವತಿಯಿಂದ ಹಮ್ಮಿಕೊಳ್ಳಲಾಯಿತು. ಯಕ್ಷಗಾನದ ಧ್ರುವತಾರೆ ಕಂಚಿನ ಕಂಠ ಕಂಠದ ಬಲಿಪ ನಾರಾಯಣ ಭಾಗವತರು ಮತ್ತು ಉಜಿರೆಯ ‌ಧಣಿಗಳು,ಧಾರ್ಮಕ ಕ್ಷೇತ್ರದಲ್ಲಿ ಹಾಗೂ ಸಮಾಜ ಸೇವೆಯಲ್ಲಿ ಹೆಸರುವಾಸಿಯಾದಂತಹ ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾಗಿದ್ದ ವಿಜಯರಾಘವ ಪಡ್ವೆಟ್ನಾಯರನ್ನು ಸ್ಮರಿಸಿ ಅವರ ಸಾಧನೆಯ‌ ಬಗ್ಗೆ ನೆನೆದು ಶ್ರೀ ಭುಜಬಲಿ ಧರ್ಮಸ್ಥಳ ಮತ್ತು ಶ್ರೀ ದಿವಾಕರ ಆಚಾರ್ಯ ಗೇರುಕಟ್ಟೆ ನುಡಿನಮನವನ್ನು ಸಲ್ಲಿಸಿದರು.

ವಿಜಯ ರಾಘವ ಪಡ್ವೆಟ್ನಾಯರ ಪುತ್ರರಾದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯರು – ಬಲಿಪರು ಯಕ್ಷಗಾನಕ್ಕೆ ನೀಡಿದ ಕೊಡುಗೆ ಹಾಗು ವಿಜಯ ರಾಘವ ಪಡ್ವೆಟ್ನಾಯರ ಸೇವೆ‌ ,ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು.
ಬಲಿಪರಂತಹ‌ ಮಹಾನ್ ಚೇತನ ಮತ್ತು ಪಡ್ವೆಟ್ನಾಯರಂತಹ‌ ಮಹನೀಯರು ಸಮಾಜದ ಅನರ್ಘ್ಯ ರತ್ನಗಳೆಂದು ಸಾಧನೆಯ‌ನ್ನು ಸ್ಮರಿಸಿ ಕೀರ್ತಿಶೇಷರಿಗೆ ಅಕ್ಷರಾಂಜಲಿಗಳನ್ನು ಕರಾಡ ಬ್ರಾಹ್ಮಣ ಸಮಾಜದ ಅಧ್ಯಕ್ಷರು ಡಾ.ಪ್ರದೀಪ ಆಟಿಕುಕ್ಕೆ ಇವರು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಕರಾಡ ಬಂಧು ಭಗಿನಿಯರು ಹಾಗೂ ವಿಜಯ ರಾಘವ ಪಡ್ವೆಟ್ನಾಯರ ಮತ್ತು ಬಲಿಪ ನಾರಾಯಣ ಭಾಗವತರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.ಮಮತಾ.ವಿ.ಭಟ್ ಸ್ವಾಗತಿಸಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು. ಕಾರ್ಯಕ್ರಮಾನಂತರ ಇಬ್ಬರು ಮಹಾನ್ ಚೇತನರ ಸವಿ ನೆನಪಿಗಾಗಿ ಯಕ್ಷ ಭಾರತಿ ಕನ್ಯಾಡಿ ಇವರ ಸಂಯೋಜನೆಯಲ್ಲಿ “ಶ್ರೀ ರಾಮ ಪರಂಧಾಮ” ಯಕ್ಷಗಾನ ತಾಳಮದ್ದಳೆ ನಡೆಯಿತು.

Related posts

ಬೆಳ್ತಂಗಡಿ ಶ್ರೀ ಧ. ಮಂ. ಆಂ.ಮಾ. ಶಾಲೆಗೆ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯಲ್ಲಿ ಬಹುಮಾನ

Suddi Udaya

ಎಸ್‌.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ಒಂದು ಹಾಗೂ ಎರಡನೇ ತರಗತಿಯ ವಿದ್ಯಾರ್ಥಿಗಳಿಗೆ “ಮಕ್ಕಳಿಗಾಗಿ ಕಥೆ” ಕಾರ್ಯಕ್ರಮ

Suddi Udaya

ಮದ್ದಡ್ಕ ಮಠದಲ್ಲಿ ಶ್ರೀ ರಾಮೋತ್ಸವ ಆಚರಣೆ:ಆಯೋಧ್ಯೆ ಶ್ರೀರಾಮ ಮಂದಿರ ಹೊಕ್ಕರೆ ದೇಶದ ಸಂಸ್ಕೃತಿಗಳ ಅನಾವರಣ: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

Suddi Udaya

ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಭಟ್ ಗೆ ಸನ್ಮಾನ

Suddi Udaya

ಉಜಿರೆ: ಎಸ್.ಡಿ. ಎಮ್ ಆಂ.ಮಾ. ಶಾಲೆಯಲ್ಲಿ ದೀಪಾವಳಿಯ ಮಹತ್ವ ‘ಜ್ಞಾನ ಜ್ಯೋತಿ’ ಕಾರ್ಯಕ್ರಮ

Suddi Udaya

ಎಲ್ ಸಿ ಆರ್ ಇಂಡಿಯನ್ ವಿದ್ಯಾ ಸಂಸ್ಥೆಯ ಪ್ರೌಢ ವಿಭಾಗದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ

Suddi Udaya
error: Content is protected !!