ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ

Suddi Udaya

ನಾಳ : ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ ಮಾಡುತ್ತಿರುವವರಿಗೆ ನಾಳ ಶ್ರೀ ದುರ್ಗಾಪರಮೇಶ್ವರಿ
ಅಮ್ಮನವರೇ ತಕ್ಕ ಶಾಸ್ತಿ ಮಾಡುವಂತೆ ಕಳಿಯ ಹಾಗೂ ನ್ಯಾಯತರ್ಪು ಗ್ರಾಮದ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರು
ದೇವಿಯ ಮೊರೆ ಹೋಗಿದ್ದಾರೆ.


ನವ ಬೆಳ್ತಂಗಡಿಯ ಹರಿಕಾರ, ನಮ್ಮೆಲ್ಲರ ಶಾಸಕರ ವಿರುದ್ಧ ನಮ್ಮೂರಿನಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ ಮಾಡುತ್ತಿದ್ದು, ಈ ರೀತಿ ಅಪಪ್ರಚಾರ ಮಾಡುವವರಿಗೆ ನೀವೇ ಸರಿಯಾದ ತಕ್ಕ ಶಾಸ್ತಿ ಮಾಡಿ ಹಾಗೂ ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಹರೀಶ್ ಪೂಂಜ ಅವರು ವಿಜೇತರಾಗಿ ತಾಲೂಕಿನ ಅಭಿವೃದ್ದಿಯನ್ನು ಮಾಡಲಿ
ಎಂದು ಆರಾಧ್ಯ ದೇವತೆಯಾದ ನಾಳ ಶ್ರೀ ದುರ್ಗಾಪರಮೇಶ್ವರಿ
ಅಮ್ಮನವರಲ್ಲಿ ಎಂ.7
ಇಂದು ಕಾಯ೯ಕತ೯ರು ವಿಶೇಷ
ಪ್ರಾರ್ಥನೆ ಸಲ್ಲಿಸಿದರು.
ಕಳಿಯ ಹಾಗೂ ನ್ಯಾಯತರ್ಪು ಬಿಜೆಪಿ ಶಕ್ತಿ ಕೇಂದ್ರದ ಕಾರ್ಯಕರ್ತರು ಆಗಮಿಸಿ ಈ ಪ್ರಾಥ೯ನೆಯನ್ನು ನೆರವೇರಿಸಿದರು.

Leave a Comment

error: Content is protected !!