September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶಿಶಿಲ ಜಯರಾಮ ನೆಲ್ಲಿತ್ತಾಯರಿಗೆ ” ಭಜನಾ ಭಾಸ್ಕರ ” ಪ್ರಶಸ್ತಿ :

ಶಿಶಿಲ : ಅದೊಂದು ಅಪರೂಪದ ‌ಕಾರ್ಯಕ್ರಮ. ಪ್ರತೀವರ್ಷ ಶಿಶಿಲ ಶಿವಕೀರ್ತಿ ನಿಲಯದಲ್ಲಿ ಹನೂಮ ಜಯಂತಿಯಂದು ಭಜನೆ, ಅನ್ನದಾನ, ರಾಮಾಯಣ ಗ್ರಂಥಪೂಜೆ, ರಾಮಾಯಣ ಕಥೆ ನಿರಂತರ ನಡೆದುಕೊಂಡು ಬರುತ್ತಿದೆ.

ಹನುಮ ಜಯಂತಿ ಈ ರೀತಿಯ‌ ಕಾರ್ಯಕ್ರಮ ನಾನು ಪ್ರಥಮ ಬಾರಿ ನೋಡುತ್ತಿದ್ದೆನೆ. ಧಾರ್ಮಿಕ ಕಾರ್ಯ, ಧರ್ಮ ಜಾಗ್ರತಿ ಮೂಡಿಸುತ್ತಿರುವ ಈ ಮನೆಯ ಸೇವಾ ಕಾರ್ಯಕ್ಕೆ‌ ಅಭಿನಂದನೆ. ಎಂದು ಬೆಂಗಳೂರು, ದಾವಣಗೆರೆ ವಿಪ್ರ ಸಾಮ್ರಾಜ್ಯದ ನಿರ್ದೆಶಕರಾದ ವೆ.ಮೂ ಶ್ರೀ ರಾಘವೇಂದ್ರ ಆಚಾರ್ಯ ನುಡಿದರು.

ಅವರು ಶಿಶಿಲ ಶಿವಕೀರ್ತಿ ನಿಲಯದಲ್ಲಿ ನಡೆದ‌ ಹನೂಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನುಡಿದಿದ್ದರು,
ಇವರ ಧಾರ್ಮಿಕ ಸೇವಾ ಕಾರ್ಯ ಗುರುತಿಸಿದ ವಿಪ್ರ ಸಮೂಹ ಸಂಸ್ಥೆ ಬೆಂಗಳೂರಿನ ನಿರ್ದೆಶಕರಾದ ಶ್ರೀ ವೆ.ಬ್ರಹ್ಮ ರಾಘವೇಂದ್ರ ಆಚಾರ್ಯ ಮತ್ತು ಶ್ರೀ ರಾಘವೇಂದ್ರ ಮಾದಾಪುರ ಇವರು ಹನೂಮ ‌ಜಯಂತಿ ಶುಭ ಸಂಧರ್ಭದಲ್ಲಿ ಶ್ರೀ ಬಿ.ಜಯರಾಮ ನೆಲ್ಲಿತ್ತಾಯರಿಗೆ ತಮ್ಮ ಸಂಸ್ಥೆ ವತಿಯಿಂದ ” ಭಜನಾ ಭಾಸ್ಕರ” ಎಂಬ ಪ್ರಶಸ್ತಿ ಪ್ರಸ್ತಾಪವನ್ನು ಮಂಡಿಸಿದರು.

ಮುಂದಿನ ದಿನದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ‌ಕಾಟುಕುಕ್ಕೆ, ಶ್ರೀ ಸುಂದರ ಬಿಳಿನೆಲೆ, ಶ್ರೀ ರಾಘವೇಂದ್ರ ಕಿಗ್ಗ, ಶ್ರೀ ಶ್ರೀನಿವಾಸ‌ ಮೂಡೆತ್ತಾಯ ಮುಂತಾದ ಗಣ್ಯರು ಉಪಸ್ಥಿತರಿದ್ದರು. ‌
ಇದೆ ಸಂಧರ್ಭದಲ್ಲಿ ಶ್ರೀ ಜಯರಾಮ ನೆಲ್ಲಿತ್ತಾಯ ದಂಪತಿಗಳನ್ನು ವಿಪ್ರ ಸಮೂಹ ಸಂಸ್ಥೆ ಬೆಂಗಳೂರು ವತಿಯಿಂದ ಅಭಿನಂದಿಸಲಾಗಿತ್ತು.

Related posts

ಉಜಿರೆ ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

Suddi Udaya

ಕೊಯ್ಯೂರು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಭಜನೆ

Suddi Udaya

ಬೆಳ್ತಂಗಡಿ : ಧನು ಪೂಜೆಗೆ ಹೋದ ಬಾಲಕನ ಶವ ಕೆರೆಯಲ್ಲಿ ಪತ್ತೆ ಪ್ರಕರಣ: ಪೊಲೀಸರಿಂದ ತೀವ್ರಗೊಂಡ ಶೋಧ ಕಾರ್ಯ

Suddi Udaya

ಪಡಂಗಡಿ ಪ್ರಾ. ಕೃ.ಪ. ಸ. ಸಂಘದ ವಾರ್ಷಿಕ ಮಹಾಸಭೆ: ವರದಿ ಸಾಲಿನಲ್ಲಿ 47.55 ಕೋಟಿ ವ್ಯವಹಾರ, 90.96 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ.12% ಡಿವಿಡೆಂಟ್ ಘೋಷಣೆ

Suddi Udaya

ವೇಣೂರು: ಅಕ್ರಮವಾಗಿ ಸಾಗಿಸುತ್ತಿದ್ದ 125 ಕೆ‌ಜಿ ರಕ್ತ ಚಂದನ: ವಾಹನ ಸಮೇತ ರಕ್ತ ಚಂದನ ವಶಕ್ಕೆ ಪಡೆದ ವೇಣೂರು ಅರಣ್ಯಧಿಕಾರಿಗಳು

Suddi Udaya

ಉಜಿರೆ: ಮಿತ್ರ ಯುವಕ ಮಂಡಲ ಹಾಗೂ ಮಿತ್ರ ಮಹಿಳಾ ಮಂಡಳಿ ಜಂಟಿ ಆಶ್ರಯದಲ್ಲಿ ಪ್ರತಿಭಾ ಸಂಗಮ

Suddi Udaya
error: Content is protected !!