ಹರೀಶ್ ಪೂಂಜ ಬೃಹತ್ ಬಹುಮತದಿಂದ ಗೆಲುವು: ಬಳಂಜ, ನಾಲ್ಕೂರು, ತೆಂಕಕಾರಂದೂರಿನಲ್ಲಿ ವಿಜಯೋತ್ಸವ

Suddi Udaya

ಬಳಂಜ: ಭಾರತೀಯ ಜನತಾ ಪಾರ್ಟಿಯ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರು ಬೃಹತ್ ಅಂತದಿಂದ ಗೆಲುವನ್ನು ಸಾಧಿಸಿ ಶಾಸಕರಾಗಿ ಆಯ್ಕೆಯಾಗಿದ್ದು ಬಳಂಜ, ನಾಲ್ಕೂರು,ತೆಂಕಕಾರಂದೂರು ಕಾರ್ಯಕರ್ತರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.

ಹರೀಶ್ ಪೂಂರವರು ಜನ ಸೇವಕನಾಗಿ ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬಹುಕೋಟಿ ಅನುದಾನ ನೀಡಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿದ್ದು ಜನಸೇವೆ ಮತ್ತು ಅಭಿವೃದ್ಧಿಯಿಂದ ಮತ್ತೆ ಶಾಸಕರಾಗಿ ಮೂಡಿಬಂದಿದ್ದು ಖುಷಿ ತಂದಿದೆ ಎಂದು ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.

ವಿಜಯೋತ್ಸವದಲ್ಲಿ ಬಳಂಜ ಗ್ರಾ.ಪಂ ಅಧ್ಯಕ್ಷ ಹೇಮಂತ್, ಪ್ರಮುಖರಾದ ಹರೀಶ್ ಶೆಟ್ಟಿ ನಾಲ್ಕೂರು, ವಿಶ್ವನಾಥ ಹೊಳ್ಳ,ರಾಕೇಶ್ ಹೆಗ್ಡೆ ಬಳಂಜ, ಬಾಲಕೃಷ್ಣ ಪೂಜಾರಿ ಯೈಕುರಿ, ಯಶೋಧರ ಶೆಟ್ಟಿ, ಸುರೇಶ್ ಪೂಜಾರಿ ಜೈಮಾತ,ಗಣೇಶ್ ದೇವಾಡಿಗ ಸಂಭ್ರಮ, ರಜತ್ ಹೆಗ್ಡೆ ಬಳಂಜ, ಪದ್ಮನಾಭ ಕುಲಾಲ್, ಬೇಬೀ ನಾರಾಯಣ, ಶೋಭಾ ಕುಲಾಲ್, ಜಯಶೆಟ್ಡಿ ಪಾದೆ,ಶರತ್ ಕಾಡಬಾಗಿಲು,ಜಗದೀಶ್ ರೈ ಹಾನಿಂಜ,ಪ್ರವೀಣ್ ಕಟ್ಟೆ,ಸಂತೋಷ್ ಹೆಗ್ಡೆ ವೀರ ಮಾರುತಿ,ಸನತ್ ಶೆಟ್ಟಿ ನಾಲ್ಕೂರು,ಮಂಗಳ ದೇವಾಡಿಗ,ದುಗ್ಗಯ್ಯ ಪೂಜಾರಿ, ದಿನೇಶ್ ಕೋಟ್ಯಾನ್, ಪ್ರಜ್ವಲ್, ಕರುಣಾಕರ ಹೆಗ್ಡೆ, ಜಗದೀಶ್ ಪೆರಾಜೆಹಾಗೂ ಕಾರ್ಯಕರ್ತರು, ಪಂ.ಸದಸ್ಯರು, ಅಭಿಮಾನಿಗಳು ಇದ್ದರು.

Leave a Comment

error: Content is protected !!