July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಶಿಶಿಲದ ಜಿನ ಮಂದಿರದಲ್ಲಿ ಪಂಚಕಲ್ಯಾಣ : ಬಿಂಬವನ್ನು ತರುವಲ್ಲಿ ಸಹಕರಿಸಿದವರಿಗೆ ಅಭಿನಂದನೆ

ಶಿಶಿಲ: ಜೂ. 11 ರಂದು ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಜಿನ ಮಂದಿರದಲ್ಲಿ ಪಂಚಕಲ್ಯಾಣದಿಂದ ಸಂಪನ್ನಗೊಂಡ ಶ್ರೀ ಸಿದ್ದ ಭಗವಂತರು ವಿರಾಜಮಾನರಾದ ಈ ಸಂದರ್ಭದಲ್ಲಿ ಬಿಂಬವನ್ನು ತರುವಲ್ಲಿ ಸಹಕರಿಸಿದ ಅಜಿತ್ ರವರನ್ನು ಆಡಳಿತ ಮಂಡಳಿ ಹಾಗೂ ದಾನಿಗಳಾದ ಉಜಿರೆಯ ಎಸ್. ಡಿ ಶೆಟ್ಟಿ ದಂಪತಿಗಳು ಗೌರವಿಸಿದರು. ‌

ಪಡಂಗಡಿ ಜಿನೇಂದ್ರ ಭಂಗ , ಉಜಿರೆಯ ನಾಗರಾಜ ಪೂವಣಿ ಯವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಧನಕೀರ್ತಿ ಶೆಟ್ಟಿ ಧರ್ಮಸ್ಥಳ, ಯಶೋಧರ ಶೆಟ್ಟಿ ಸಮೃಧಿ, ರವಿರಾಜ ಶೆಟ್ಟಿ ಕುಂಡೊವು, ಆಡಳಿತ ಮಂಡಳಿ ಅಧ್ಯಕ್ಷರಾದ ವಿಜಯಕುಮಾರ್, ಕಾರ್ಯಾಧ್ಯಕ್ಷರಾದ ಚಿತ್ತರಂಜನ್, ಉಪಾಧ್ಯಕ್ಷರಾದ ಜಿನರಾಜ ಪೂವಣಿ, ಕೋಶಾಧಿಕಾರಿ ಪಣಿರಾಜ್ ಜೈನ್, ವೀರೇಂದ್ರ ಕುಮಾರ್ ವಳಂಬಲ, ಸಂತೋಷ್ ಕುಮಾರ್ ವಳಂಬಲ, ಉಜಿರೆಯ ನಾಭಿರಾಜ ಪೂವಣಿ, ರಾಣಿ ಶಿಶುಗಲಿ ಜೈನ ಮಹಿಳಾ ಸಮಾಜದ ಅಧ್ಯಕ್ಷ ಶ್ರೀಮತಿ ನಾಗಕನ್ನಿಕ, ಶ್ರೀಮತಿ ಶಶಿಪ್ರಭ ಶ್ರೀಮತಿ ಸುಗುಣ ಶೆಟ್ಟಿ, ಶ್ರೀಮತಿ ಶಕುಂತಲಾ ಜೈನ್ ಶ್ರೀಮತಿ ಸುರಭಿ, ಶ್ರೀಮತಿ ಜಯಶ್ರೀ, ಶ್ರೀಮತಿ ಸರೋಜಾ ಮೊದಲಾದವರು ಉಪಸ್ಥಿತರಿದ್ದರು.

ಭೋಜನದ ವ್ಯವಸ್ಥೆಯನ್ನು ಶ್ರೀಮತಿ ಸುರಭಿ ಜಯಕುಮಾರ್ ಕಲ್ಲುಗುಡ್ಡೆ ಮಾಡಿದರು. ಕಾರ್ಯಕ್ರಮವನ್ನು ಡಾ.ಜಯಕೀರ್ತಿ ಜೈನ್ ನಿರ್ವಹಣೆ ಮಾಡಿದರು

Related posts

ಅಳದಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.96 ಫಲಿತಾಂಶ

Suddi Udaya

ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಬೆಳ್ತಂಗಡಿ ಮಂಡಲ ಬಿಜೆಪಿ ಯುವ ಮೋರ್ಚಾ ವತಿಯಿಂದ ಗುರುವಾಯನಕೆರೆ ಹುತಾತ್ಮ ವೀರ ಯೋಧ ಏಕನಾಥ್ ಶೆಟ್ಟಿಯವರ ಪುತ್ಥಳಿಗೆ ಗೌರವ ನಮನ

Suddi Udaya

ಪಡಂಗಡಿ ವಿಶೇಷ ಚೇತನರ ಸಮನ್ವಯ ಗ್ರಾಮಸಭೆ-ಸಾಧಕರಿಗೆ ಗೌರವ ಸನ್ಮಾನ

Suddi Udaya

ತೋಟತ್ತಾಡಿ ನಿವಾಸಿ ಜಯರಾಮ ರವರ ಚಿಕಿತ್ಸೆಗೆ ನೆರವಾಗಿ

Suddi Udaya

ಅಯೋಧ್ಯೆ ಸಂಭ್ರಮಾಚರಣೆ ಸಂದರ್ಭ ಬಡಗಕಾರಂದೂರು ಗ್ರಾಮದ ಬಿಕ್ಕಿರ ನಿವಾಸಿಗಳಿಂದ ತಮ್ಮ ವಾಸಸ್ಥಳದ ಪರಿಸರವನ್ನು ರಾಮನಗರ ಎಂಬ ನಾಮಕರಣ

Suddi Udaya

ಕಳೆಂಜ: ಕಾಯರ್ತಡ್ಕ ವಿಶ್ವನಾಥ ಗೌಡ ರವರ ಮನೆಯಲ್ಲಿ ಕಾಳಿಂಗ ಸರ್ಪ ಪತ್ತೆ

Suddi Udaya
error: Content is protected !!