ಕಣಿಯೂರು: ಟೀಂ ನವಕೇಸರಿ ಮಲೆಂಗಲ್ಲು ಮತ್ತು ಅರಣ್ಯ ಇಲಾಖೆ ಉಪ್ಪಿನಂಗಡಿ ವಲಯ ಇದರ ಸಹಕಾರದೊಂದಿಗೆ ಶ್ರೀ ಉಮಾಮಹೇಶ್ವರ ಭಜನಾ ಮಂದಿರ ಮಲೆಂಗಲ್ಲು ಮತ್ತು ಉಮಾಮಹೇಶ್ವರ ದೇವಸ್ಥಾನ ಮಲೆಂಗಲ್ಲು ಇಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಟ್ಟು ಸಮಾಜದಲ್ಲಿ ಪರಿಸರದ ಬ್ಗಗೆ ಜಾಗೃತಿ ಮೂಡಿಸಿ ವನಮಹೋತ್ಸವ ಆಚರಿಸಲಾಯಿತು.
ಕೊಲ್ಲಾಜೆ ಚಿದಾನಂದ ರಾವ್ ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಕಣಿಯೂರು ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ ಗೋಪಾಲ ಗೌಡ, ಉಪಾಧ್ಯಕ್ಷೆ ಜಲಜಾಕ್ಷಿ, ಕಣಿಯೂರು ಉಪವಲಯಾರಣ್ಯಧಿಕಾರಿ ಬಿ. ಜರಾಲ್ಡ್ ಡಿಸೋಜ, ಕೊಯ್ಯೂರು ಗಸ್ತು ಪಾಲಕರು ಜಗದೀಶ್, ಬಂದಾರು ಗಸ್ತು ಪಾಲಕರು ಜಗದೀಶ್ ಕೆ.ಎನ್, ಅರಣ್ಯ ವೀಕ್ಷಕರು ರವಿ, ಸೇಸಪ್ಪ, ರವಿ ಪದ್ಮುಂಜ, ದಿನೇಶ್ ಮಲೆಂಗಲ್ಲು ಉಪಸ್ಥಿತರಿದ್ದರು.
ಮುಖೇಶ್ ಪದ್ಮುಂಜ ವಂದಿಸಿದರು. ಟೀಂ ನವಕೇಸರಿಯ ಅಧ್ಯಕ್ಷರು, ಹಾಗೂ ಸದಸ್ಯರು ಉಪಸ್ಥಿತರಿದ್ದರು.













