September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕ

ಉಜಿರೆ: ಅಲ್-ಅಮೀನ್ ಯಂಗ್-ಮೆನ್ಸ್ ಹಳೆಪೇಟೆ ಇದರ ವತಿಯಿಂದ ಸುನ್ನತ್ (ಮುಂಜಿ) ಕಾರ್ಯಕ್ರಮ

ಉಜಿರೆ: ಅಲ್-ಅಮೀನ್ ಯಂಗ್-ಮೆನ್ಸ್ ಹಳೆಪೇಟೆ ಇದರ ವತಿಯಿಂದ ಉಜಿರೆ ವ್ಯಾಪ್ತಿಯ 25 ಮಕ್ಕಳ ಸುನ್ನತ್(ಮುಂಜಿ)ಕಾರ್ಯಕ್ರಮದ ಸಮಾರಂಭ ನಡೆಯಿತು.

ಈ ಸಮಾರಂಭದಲ್ಲಿ ದುವಾ: ರಫೀಕ್ ಮದನಿ MJM ಮುದರಿಸ್, ಯಂಗ್-ಮೆನ್ಸ್ ಅಧ್ಯಕ್ಷ ಶಾಕೀರ್. ,ಮಹಮ್ಮದ್ ಹಾಜಿ ಕಲ್ಯಾಣ್ ಪುರ, ಡಾಕ್ಟರ್ ಸಿದ್ದೀಕ್ ಅಡ್ಡುರ್., ಸಹಾಯಕರಾದ ರಹಿಮಾನ್, ಕೇಂದ್ರ ಕಮಿಟಿ ಜತೆಕಾರ್ಯದರ್ಶಿ ಯು.ಕೆ ಹನೀಫ್, ಖಜಾಂಚಿ ರಹಿಮಾನ್ ,ಯಂಗ್-ಮೆನ್ಸ್ ಸದಸ್ಯರು ಇನ್ನಿತರ ಗಣ್ಯರು ಆಗಮಿಸಿದ್ದರು.

ಡಾಕ್ಟರ್ ಸಂಪೂರ್ಣ ವೆಚ್ಚವನ್ನು ಅಬ್ದುಲ್ ರಹಿಮಾನ್ ಅಸಿಸ್ಟೆಂಟ್ ಕಮಿಷನರ್ ವಹಿಸಿಕೊಂಡರು. ಮುಂಜಿ ಮಾಡಿಸಿದ ಮಕ್ಕಳಿಗೆ ಬಟ್ಟೆಬರೆಯನ್ನು MJM ಮಾಜಿ ಅಧ್ಯಕ್ಷರು ನೀಡಿದರು.

ಬೆಳಗಿನ ಉಪಹಾರ ವ್ಯವಸ್ಥೆಯನ್ನು ಕೇಂದ್ರ ಕಮಿಟಿ ಸದಸ್ಯರಾದ ಬಿ.ಎಂ. ಹನೀಫ್ ವ್ಯವಸ್ಥೆ ಮಾಡಿದರು.
ಕಾರ್ಯಕ್ರಮವನ್ನು ಯಂಗ್-ಮೆನ್ಸ್ ಪ್ರಧಾನ ಕಾರ್ಯದರ್ಶಿ:-ಪಝಲ್ ರಹಿಮಾನ್ ಕೋಯ ನಿರೂಪಿಸಿದರು.

ಈ ಪುಣ್ಯ ಕಾರ್ಯಕ್ಕೆ ಕೊಡುಗೆಯನ್ನು ನೀಡಿದ ದಾನಿಗಳಿಗೂ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಲಾಯಿತು.

ಆಮೀನ್

Related posts

ರಿಕ್ಷಾ ಸ್ಕೂಟಿಗೆ ಡಿಕ್ಕಿ: ಸ್ಕೂಟಿ ಸವಾರ ಗಂಭೀರ ಗಾಯ

Suddi Udaya

ಇಂದಬೆಟ್ಟು ಗ್ರಾಮ ಪಂಚಾಯತ್ ನ ಪ್ರಥಮ ಸುತ್ತಿನ ಗ್ರಾಮಸಭೆ

Suddi Udaya

ಪಡ್ಪು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಗುರುವಾಯನಕೆರೆ: ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ

Suddi Udaya

ಬೆಳ್ತಂಗಡಿ: ರಾಷ್ಟ್ರೀಯ ಮಟ್ಟದ ಸಾಫ್ಟ್‌ಸ್ಕಿಲ್ ಟ್ರೈನರ್ ಡಾ. ಟಿ. ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಟಿಒಟಿ ತರಬೇತಿ

Suddi Udaya

ಬೆಳ್ತಂಗಡಿ ನಗರದ ಬೂತ್ ಸಂಖ್ಯೆ 105, 106 ಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

Suddi Udaya
error: Content is protected !!