25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಜಸ್ಟ್ ರೈಡ್ ನೋಡುತ್ತೇನೆಂದು ಬೈಕ್ ತೆಗೆದುಕೊಂಡಾತ ವಾಪಸ್ ಬರಲೇ ಇಲ್ಲ: ಇತ್ತೆ ಬರುವೆ ಎಂದು ಹೇಳಿ ಹೋದಾತನೂ ಇಲ್ಲ…ಬೈಕೂ ಇಲ್ಲ…:ಕಾಶಿಪಟ್ಣದ ಯುವಕ ಇಶಾನ್ ಪೂಜಾರಿಯರಿಂದ ಮೂಡಬಿದ್ರೆ ಪೋಲೀಸರಿಗೆ ದೂರು: ಬೈಕ್ ಸಹಿತ ಇಶಾನ್ ಶೆಟ್ಟಿ ಉಚ್ಚಿಲ್ ಪೊಲೀಸರ ವಶ

ಕಾಶಿಪಟ್ಣ : ಇನ್ಸ್ಟ್ರಾಗ್ರಾಮ್ ನಲ್ಲಿ ಪರಿಚಯವಾಗಿ ಬೈಕ್ ಖರೀದಿಗೆಂದು ಬಂದು ‘ಜಸ್ಟ್ ರೈಡ್’ ಎಂದು ಬೈಕ್ ಟ್ರಯಲ್ ನೋಡಲೆಂದು ಬೈಕ್ ಕೊಂಡು ಹೋದಾತ ವಾಪಸ್ ಬಾರದೆ ವಂಚಿಸಿದ ಪ್ರಕರಣವೊಂದು ಶಿರ್ತಾಡಿಯಲ್ಲಿ ಕಳೆದ ಆದಿತ್ಯವಾರ ನಡೆದಿದೆ.

 ಕಾಶಿಪಟ್ಟ ಸಮೀಪದ ಯುವಕ ಇಶಾನ್ ಪೂಜಾರಿಯವರಿಗೆ ಇನ್ಸ್ಟ್ರಾಗ್ರಾಮ್ ನಲ್ಲಿ ಯುವಕನೋರ್ವನ ಪರಿಚಯವಾಗಿತ್ತು. ಇಬ್ಬರ ನಡುವೆ ಇನ್ಸ್ಟ್ರಾಗ್ರಾಮ್ ನಲ್ಲೇ ದಿನಂಪ್ರತಿ ಕುಶಲ ಸಮಾಚಾರ ನಡೆಯುತ್ತಿತ್ತು.

 ಹೆಚ್ಚು ಹತ್ತಿರವಾಗುತ್ತಿದ್ದಂತೇ ಕಾಶಿಪಟ್ಣದ ಯುವಕ ಇಶಾನ್ ಪೂಜಾರಿಯವರಿಗೆ ಡ್ಯೂಕ್ ಬೈಕ್ ಇರುವುದನ್ನು ವಂಚಕ ಯುವಕ ಇಶಾನ್ ಶೆಟ್ಟಿ ಉಚ್ಚಿಲ್ ತಿಳಿದುಕೊಳ್ಳುತ್ತಾನೆ. ಸೇಲ್, ರೇಟ್ ಎಂಬೆಲ್ಲಾ ಮಾತು ಕತೆಯೂ ನಡೆಯುತ್ತದೆ.

 ನಾನು ಖರೀದಿಸುತ್ತೇನೆ ಎಂದು ವಿಳಾಸ ಕೇಳಿದ್ದಾನೆ. ಕಾಶಿಪಟ್ಣದ ಯುವಕ ಶಿರ್ತಾಡಿಗೆ ಬರಲು ಹೇಳಿದ್ದಾನೆ. ಅದರಂತೆ ಸೋಮವಾರ ಶಿರ್ತಾಡಿಗೆ ಬಂದ ಯುವಕ ‘ಜಸ್ಟ್ ರೈಡ್’ ಎಂದು ಟ್ರಯಲ್ ಗೆ ಕೊಂಡೋಗಿದ್ದಾನೆ. ಬೈಕ್ ಕೊಟ್ಟವ ಇತ್ತೆ ಬರುವೆ, ಇತ್ತೆ ಬರುವೆ ಎಂದು ಕಾದದ್ದೇಬಂತು. ಬೈಕೂ ವಾಪಸ್ ಬರಲಿಲ್ಲ, ಕೊಂಡುಹೋದವನೂ ಬರಲಿಲ್ಲ.

  ಕಾಶಿಪಟ್ಣದ ಯುವಕನಲ್ಲಿ ವಂಚಕನ ವಿಳಾಸವಾಗಲೀ, ಮೊಬೈಲ್ ನಂಬ್ರವಾಗಲೀ ಯಾವುದೂ ಇರಲಿಲ್ಲ. ಕೇವಲ ಇನ್ಸ್ಟ್ರಾಗ್ರಾಮ್ ನಲ್ಲಿ ಆದ ಪರಿಚಯ ಮಾತ್ರ.

  ಎಷ್ಟು ಕಾದರೂ ವಾಪಸ್ ಬಾರದನ್ನು ಕಂಡು ತಾನು ಮೋಸಹೋದ ಬಗ್ಗೆ ಅರಿತುಕೊಂಡ ಕಾಶಿಪಟ್ಣದ ಯುವಕ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ.
ಇಂದು ಬುಧವಾರ ಬೆಳಿಗ್ಗೆ ಬೈಕ್ ಪತ್ತೆ‌:
ಇಶಾನ್ ಶೆಟ್ಟಿ ಉಚ್ಚಿಲ ಕಡೆಯವನಾಗಿದ್ದು ಮೂಡಬಿದ್ರೆ ಪೊಲೀಸರು ತನಿಖೆ ನಡೆಸಿ ಬೈಕ್ ಪತ್ತೆ ಮಾಡಿ ಕಾಶಿಪಟ್ಣದ ಯುವಕ ಇಶಾನ್ ಪೂಜಾರಿಯವರಿಗೆ ಹಸ್ತಾಂತರಿಸಿದ್ದಾರೆ. ಅಂತೂ ‘ಜಸ್ಟ್ ರೈಡ್’ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾ ಗುತ್ತಿದೆ.

Related posts

ಬೆಳ್ತಂಗಡಿ: ಸವಣಾಲುವಿನಲ್ಲಿ ಬೋನಿಗೆ ಬಿದ್ದ ಚಿರತೆ

Suddi Udaya

ಬೆಳ್ತಂಗಡಿ ಕಥೋಲಿಕ್ ಕ್ರೆಡಿಟ್ ಸಹಕಾರ ಸಂಘ ಇದರ ಸ್ವಂತ ಕಟ್ಟಡ “ಆಶಾಕಿರಣ” ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ ಹಾಗೂ ಸಂಘದ ಪ್ರಧಾನ ಕಚೇರಿ ಉದ್ಘಾಟನೆ

Suddi Udaya

ಉಜಿರೆಯ ಎಸ್.ಡಿ.ಎಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಗ್ನಿ ಅವಘಡ ನಿರ್ವಹಣೆ ಕುರಿತು ಮಾಹಿತಿ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆ

Suddi Udaya

ಚಾರ್ಮಾಡಿ: ನಿಯಂತ್ರಣ ತಪ್ಪಿ ಬೊಲೆರೋ ವಾಹನ ಪಲ್ಟಿ

Suddi Udaya

ಎಸ್.ಎನ್.ಡಿ.ಪಿ ತೋಟತ್ತಾಡಿ ಶಾಖೆಯಲ್ಲಿ ಗುರುಪೂಜೆ

Suddi Udaya

ಕೆ.ಎಸ್.ಎಂ.ಸಿ.ಎ ಕೇಂದ್ರ ಸಮಿತಿಯ ವತಿಯಿಂದ ಉಜಿರೆ ಸಂತ ಜಾರ್ಜ್ ದೇವಾಲಯಕ್ಕೆ ಭೇಟಿ

Suddi Udaya
error: Content is protected !!