ಬರೆಂಗಾಯ ನಿಸರ್ಗ ಯುವಜನೇತರ ಮಂಡಲ ಹಾಗೂ ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ

Suddi Udaya

ನಿಡ್ಲೆ: ನಿಸರ್ಗ ಯುವಜನೇತರ ಮಂಡಲ ಬರೆಂಗಾಯ ಮತ್ತು ಅರಣ್ಯ ಇಲಾಖೆ ಉಪ್ಪಿನಂಗಡಿ ವಲಯ ಇದರ ಸಹಯೋಗದಲ್ಲಿ ವನಮಹೋತ್ಸವ ಕಾರ್ಯಕ್ರಮ ಜು. 22 ರಂದು ಶ್ರೀ ನಾಗವೇಣಿ ಅಮ್ಮ ಸಭಾಭವನ ಕಲ್ಕುಡಗುಡ್ಡೆ ಬರೆಂಗಾಯದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ನಿಡ್ಲೆಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಹೆಬ್ಬಾರ್ ಪೊಂರ್ದಿಲ, ವಲಯ ಅರಣ್ಯಾಧಿಕಾರಿ ಅಶೋಕ್ ಕೆ. ಆರ್., ಪಂಚಾಯತ್ ಸದಸ್ಯರು ರುಕ್ಮಯ್ಯ ಪೂಜಾರಿ ಪೋರ್ಕಳ, ಗ್ರಾಮದ ಹಿರಿಯರು ಮಹಾಲಿಂಗ ಗೌಡ ಗುತ್ತಿಮಾರು, ನಿಸರ್ಗದ ಅಧ್ಯಕ್ಷರು ಪುನೀತ್ ಪೊಂರ್ದಿಲ, ನಿಸರ್ಗ ಕಾರ್ಯದರ್ಶಿ ಶಶಿಕಾಂತ್ ಬದಿಮೆಟ್ಟು ಹಾಗೂ ನಿಸರ್ಗದ ಸಂಘಟನೆಯ ಎಲ್ಲಾ ಕಾರ್ಯಕರ್ತರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Comment

error: Content is protected !!