25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರೆಖ್ಯ : ಮರದ ಕೊಂಬೆ ಮುರಿದು ಬಿದ್ದು ಮನೆಯ ಛಾವಣಿಗೆ ಹಾನಿ: ಶಿರಾಡಿ ಗ್ರಾಮ ವಿಕಾಸ ತಂಡ ಹಾಗೂ ಕೊಕ್ಕಡ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ದುರಸ್ತಿ ಕಾರ್ಯ

ರೆಖ್ಯಾ :ಅರಸಿನಮಕ್ಕಿ ಗ್ರಾಮಪಂಚಾಯತ್ ವ್ಯಾಪ್ತಿಯ ರೆಖ್ಯ ಗ್ರಾಮದ ಪರ್ಕಳ ಎಂಬಲ್ಲಿನ ಶಾಲಿನಿ ಎಂಬ ಮಹಿಳೆಯ ಮನೆ ಮೇಲೆ ಮರದ ಕೊಂಬೆ ಮುರಿದು ಬಿದ್ದು ಮನೆಯ ಛಾವಣಿ (ಶೀಟ್)ಹಾನಿಯಾಗಿದೆ. ಅರಸಿನಮಕ್ಕಿ ಪಂಚಾಯತ್ ಅಧ್ಯಕ್ಷ ನವೀನ್ ಕೆ. ರವರ ಮನವಿ ಮೇರೆಗೆ, ಶಿರಾಡಿ ಗ್ರಾಮ ವಿಕಾಸ ತಂಡದ ಅಧ್ಯಕ್ಷ ಸುವಿನ್ ಡಿ ಕುದ್ಕೋಳಿ ಇವರ ನೇತೃತ್ವದಲ್ಲಿ ಶಿರಾಡಿ ಗ್ರಾಮ ವಿಕಾಸ ತಂಡದ ಸದಸ್ಯರು ಹಾಗೂ ಕೊಕ್ಕಡ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸ್ಥಳಕ್ಕೆ ತೆರಳಿ ಅಪಾಯಕಾರಿಯಾಗಿದ್ದ ಮರದ ಉಳಿದ ಗೆಲ್ಲುಗಳನ್ನು ತೆರವು ಗೊಳಿಸಿ ಛಾವಣಿಗೆ ಹೊಸ ಸಿಮೆಂಟ್ ಶೀಟ್ಗಳನ್ನು ಅಳವಡಿಸಿಕೊಟ್ಟರು.

ಸುರಿಯುತ್ತಿರುವ ಮಳೆಯಲ್ಲಿಯೇ ನಡೆದ ಈ ಕಾರ್ಯಾಚರಣೆಯಲ್ಲಿ ಶಿರಾಡಿ ಗ್ರಾಮ ವಿಕಾಸ ತಂಡದ ಸದಸ್ಯರಾದ ಹೊನ್ನಪ್ಪ ಕುದ್ಕೋಳಿ, ಧರ್ಮಪಾಲ ಕುದ್ಕೋಳಿ, ಗಂಗಾಧರ ಕುದ್ಕೋಳಿ, ಧನುಷ್ ಕುದ್ಕೋಳಿ, ಕಿಶಾನ್ ಕುದ್ಕೋಳಿ, ಘಟಕ ಪ್ರತಿನಿಧಿ ಆನಂದ ನಾಯ್ಕ್ ಅರಸಿನಮಕ್ಕಿ, ಸದಸ್ಯರುಗಳಾದ ಅವಿನಾಶ್ ಭಿಡೆ, ಕೃಷ್ಣಪ್ಪ ಗೌಡ ಮುಚ್ಚಿರಡ್ಕ,ಕುಶಾಲಪ್ಪ ಗೌಡ ಬದ್ರಿಜಾಲು ,ಚೇತನ್ ರೆಖ್ಯ, ಉಜಿರೆ ಘಟಕದ ಸಚಿನ್ ಭಿಡೆ ಹಾಗೂ ರಮೇಶ್ ಬೈರಕಟ್ಟ ಭಾಗವಹಿಸಿದರು. .

ಈ ಸಂದರ್ಭದಲ್ಲಿ ವಿಶ್ವನಾಥ ಗೌಡ ಪರ್ಕಳ ಹಾಗೂ ಮನೆಯವರು, ಅರಸಿನಮಕ್ಕಿ ಪಂಚಾಯತ್ ಸದಸ್ಯ ಕಿರಣ್ ಕೆರೆಜಾಲು ಸಹಕರಿಸಿದರು.

Related posts

ಎಲ್.ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಪಡುಮಲೆ ಪರವನ್ ಕುಟುಂಬಸ್ಥರ ವಾರ್ಷಿಕ ತಂಬಿಲ ಹಾಗೂ ಸನ್ಮಾನ

Suddi Udaya

ಕಣಿಯೂರು: ಕುಡುವಂತಿ ನಿವಾಸಿ ಪುತ್ತು ನಾಯ್ಕ ನಿಧನ

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಗುರಿಪಳ್ಳ ಹಾಗೂ ಶ್ರೀ ಗುರುರಾಘವೇಂದ್ರ ಭಜನಾ ಮಂಡಳಿ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಭಜನಾ ಮಂಡಳಿಯ ವಾರ್ಷಿಕೋತ್ಸವ ಹಾಗೂ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ

Suddi Udaya

ಎಸ್.ಡಿ.ಎಂ ಸೆಕೆಂಡರಿ ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ: ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

Suddi Udaya

ಜೆಸಿಐ ಭಾರತದ ವಲಯ 15ರ ವಲಯ ಸಮ್ಮೇಳನ : ಜೆಸಿಐ ಬೆಳ್ತಂಗಡಿಗೆ ಅತ್ಯುತ್ತಮ ಘಟಕ ಸೇರಿದಂತೆ ಹಲವು ಪ್ರಶಸ್ತಿ

Suddi Udaya
error: Content is protected !!