ಬಂದಾರು: ಮಾನಸಿಕ ಅಸ್ವಸ್ಥರಾದ ವೇದಾವತಿರವರನ್ನು ಗುಂಡೂರಿ ಸೇವಾಶ್ರಮಕ್ಕೆ ಸೇರ್ಪಡೆ

Suddi Udaya

ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂದಾರು ಗ್ರಾಮದ ಅತಾವು ದಿ. ಡೊಂಬಯ್ಯ ಗೌಡರ ಪುತ್ರಿ ಕುಮಾರಿ ವೇದಾವತಿ ಇವರು ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥರಾಗಿದ್ದು ಇವರನ್ನು ಯಾರು ನೋಡಿಕೊಳ್ಳುವವರು ಇಲ್ಲದೆ ಇರುವುದರಿಂದ ವೇದಾವತಿ ಯವರ ತಮ್ಮ ಶೇಖರ ಯಾನೆ ಡೀಕಯ್ಯ ಗೌಡ ಹಾಗೂ ಕುಟುಂಬದವರಾದ ಡೀಕಯ್ಯ ಗೌಡ ಅತಾವು, ಮೋನಪ್ಪ ಗೌಡ ಅತಾವು, ಶ್ರೀಮತಿ ಸರಳ, ವಾಸಪ್ಪ ಗೌಡ, ಶ್ರೀಮತಿ ಚೇತನ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಚೇತನ್ ಕುಮಾರ್ ಪಾಲ್ತಿಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ ಬಂಗೇರ ಕೆ ಇವರ ನೇತೃತ್ವದಲ್ಲಿ ವೇದಾವತಿ ಯವರನ್ನು ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾಡಿ ಹೊನ್ನಯ್ಯ ಕಾಟಿಪಳ್ಳ ಇವರು ನಡೆಸುತ್ತಿರುವ ಶ್ರೀ ಗುರು ಚೈತನ್ಯ ಸೇವಾ ಪ್ರತಿಷ್ಠಾನ (ರಿ ) ಗುಂಡೂರಿ ಇದರ ಸೇವಾಶ್ರಮದಲ್ಲಿ ಸೇರಿಸಲಾಯಿತು.

Leave a Comment

error: Content is protected !!