July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

ಬೆಳ್ತಂಗಡಿ ನವೋದಯ ಪ್ರೌಢಶಾಲೆ ಮತ್ತು ಲಾಯಿಲ ಬಿ.ಇಡಿ ಕಾಲೇಜಿನ ನಿವೃತ್ತ ಗೌರವ ಪ್ರಾಧ್ಯಾಪಕ ಪಿ ವೆಂಕಟರಮಣ ನಿಧನ

ಬೆಳ್ತಂಗಡಿ ನಿವಾಸಿ ಪಿ ವೆಂಕಟರಮಣ (84ವ) ರವರು ಅಲ್ಪಕಾಲದ ಅಸೌಖ್ಯದಿಂದ ಆ.9 ರಂದು ನಿಧನರಾದರು.

ಇವರು ದಕ್ಷಿಣ ಕನ್ನಡ ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ವಿದ್ಯಾಧಿಕಾರಿಯಾಗಿ, ಜಿಲ್ಲಾ ಉಪನಿರ್ದೇಶಕರಾಗಿ, ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ, ಜಂಟಿ ನಿರ್ದೇಶಕರಾಗಿ ಬಳಿಕ ಮಂಗಳೂರು ಸರಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಿವೃತ್ತಿ ಹೊಂದಿದರು. ನಂತರ ಬೆಳ್ತಂಗಡಿ ನವೋದಯ ಪ್ರೌಢಶಾಲೆಯಲ್ಲಿ ಮತ್ತು ಲಾಯಿಲ ಬಿ.ಇಡಿ ಕಾಲೇಜಿನಲ್ಲಿ ಗೌರವ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದರು.ಇವರು ಯಕ್ಷಗಾನ ಕಲಾವಿದರಾಗಿ ಅನೇಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

ಮೃತರು ಪತ್ನಿ ದಮಯಂತಿ, ಪುತ್ರರಾದ ಜಗದೀಶ್, ಕಿರಣ್ ಮತ್ತು ಪುತ್ರಿ ಉಷಾ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Related posts

ಪೆರೋಡಿತ್ತಾಯಕಟ್ಟೆ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಪರಿಸರ ದಿನಾಚರಣೆ

Suddi Udaya

ಹೆದ್ದಾರಿ ಅವಾಂತರ ಕೈಗಾರಿಕಾ ವಸಾಹತಿನ ಉದ್ಯಮಿಗಳ ಪ್ರತಿಭಟನೆ: ತಾ.ಪಂಕಾರ್ಯನಿರ್ವಹಣಾಧಿಕಾರಿ ಭೇಟಿ

Suddi Udaya

ಮಡಂತ್ಯಾರು: ಕೊಲ್ಪೆದಬೈಲು ಅತಿ೯ಲ ನಿವಾಸಿ ಜನಾನಂದ ಆಚಾರ್ಯ ನಿಧನ

Suddi Udaya

ಮುಂಡಾಜೆ ರಾಷ್ಟ್ರೀಯ ಹೆದ್ದಾರಿಗೆ ಬಿದ್ದ ಮರ ತೆರವು

Suddi Udaya

ಬೀಡಿ ಕಂಟ್ರಾಕ್ಟರ್ ಮಹಮ್ಮದ್ ಶಿರ್ಲಾಲು ನಿಧನ

Suddi Udaya

ಪುದುವೆಟ್ಟು: ಮುಳಿಮಜಲು ನಿವಾಸಿ ಲಕ್ಷ್ಮೀನಾರಾಯಣ ರಾವ್ ನಿಧನ

Suddi Udaya
error: Content is protected !!