ಬಳಂಜ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ- ನಾಲ್ಕೂರು-ತೆಂಕಕಾರಂದೂರು: 36ನೇ ವರ್ಷದ ಆಚರಣಾ ಸಮಿತಿ ಅಧ್ಯಕ್ಷರಾಗಿ ಯುವ ಉದ್ಯಮಿ ರಾಕೇಶ್ ಹೆಗ್ಡೆ ಬಳಂಜ ಆಯ್ಕೆ

Suddi Udaya

ಬಳಂಜ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ, ನಾಲ್ಕೂರು, ತೆಂಕಕಾರಂದೂರು ಇದರ 36 ನೇ ವರ್ಷದ ಆಚರಣಾ ಸಮಿತಿ ಅಧ್ಯಕ್ಷರಾಗಿ ಯುವ ಉದ್ಯಮಿ, ಇಕೋಫ್ರೆಶ್ ಎಂಟರ್ಪ್ರೈಸಸ್ ಮಾಲಕ ರಾಕೇಶ್ ಹೆಗ್ಡೆ ಬಳಂಜ ಆಯ್ಕೆಯಾಗಿದ್ದಾರೆ.

ಕಳೆದ 35 ವರ್ಷಗಳಿಂದ ಬಳಂಜ ಸಾರ್ವಜನಿಕ ಶ್ರೀ ಗಣೆಶೋತ್ಸವ ಸಮಿತಿಯಿಂದ ಹಲವಾರು ಜನಪರ ಹಾಗೂ ಸಮಾಜಮುಖಿ ಕೆಲಸ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ.

ಬಳಂಜ ಶ್ರೀ ಪಂಚಲಿಂಗೇಶ್ವರ ದೇವಳದ ವಠಾರದಲ್ಲಿ ನಡೆದ ಸಭೆಯಲ್ಲಿ ಗಣೇಶೋತ್ಸವದ ನೂತನ ಸಮಿತಿ ರಚಿಸಲಾಯಿತು.

2 ನೇ ಬಾರಿಗೆ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿ ಬಳಂಜ ಗ್ರಾ.ಪಂ ಉಪಾಧ್ಯಕ್ಷ ಯಶೋಧರ ಶೆಟ್ಟಿ ಅಟ್ಲಾಜೆ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಜಗದೀಶ್ ರೈ ಹಾನಿಂಜ, ಹೇಮಂತ್ ಪೂಜಾರಿ ಕಟ್ಟೆ, ಗುರುಪ್ರಸಾದ್ ಹೆಗ್ಡೆಚದರಿಮಾರು, ಕರುಣಾಕರ ಹೆಗ್ಡೆ ಬೊಕ್ಕಸ ನಾಲ್ಕೂರು, ಯೋಗೀಶ್ ಆರ್ ಯೈಕುರಿ, ಪ್ರವೀಣ್ ಡಿ ಕೋಟ್ಯಾನ್ ನಾಲ್ಕೂರು, ಕೋಶಾಧಿಕಾರಿಯಾಗಿ ಗಣೇಶ್ ದೇವಾಡಿಗ ಸಂಭ್ರಮ, ಜೊತೆ ಕಾರ್ಯದರ್ಶಿ ರಂಜಿತ್ ಪೂಜಾರಿ, ಶರತ್ ಅಂಚನ್, ರಾಘವೇಂದ್ರ ಭಟ್, ಸಾಂಸ್ಕೃತಿಕ ಸಂಚಾಲಕರಾಗಿ ಚಂದ್ರಹಾಸ ಬಳಂಜ,ಹರೀಶ್ ಹಾಣಿಂಜ ಆಯ್ಕೆಯಾಗಿದ್ದಾರೆ

ಗೌರವ ಸಲಹೆಗಾರರಾಗಿ ಕೆ.ವಸಂತ ಸಾಲಿಯಾನ್ ಕಾಪಿನಡ್ಕ, ಹೆಚ್ ಧರ್ಣಪ್ಪ ಪೂಜಾರಿ ಸಂಧ್ಯಾದೀಪಾ ನಾಲ್ಕೂರು,ಸತೀಶ್ ರೈ ಬಾರ್ದಡ್ಕ,ಪ್ರಮೋದ್ ಕುಮಾರ್ ಜೈನ್ ಬಳಂಜ,ಜಯ ಸಾಲಿಯಾನ್ ಬದಿನಡೆ ಕೊಂಗುಳ,ವಿನು ಬಳಂಜ, ಶೀತಲ್ ಪಡಿವಾಳ್ ಬಳಂಜ ಗುತ್ತು,ತಿಮ್ಮಪ್ಪ ಪೂಜಾರಿ ನಿಟ್ಟಡ್ಕ ನಾಲ್ಕೂರು, ಚಂದ್ರಶೇಖರ ಪಿ.ಕೆ ಬಳಂಜ,ಗಣೇಶ್ ಪೂಜಾರಿ ಬೊಂಟ್ರೋಟ್ಟು, ಕೊರಗಪ್ಪ ಶೆಟ್ಟಿ ಪಂಬಾಜೆ,ಸಂತೋಷ್ ಕುಮಾರ್ ಕಾಪಿನಡ್ಕ,ವಿಜಯ ಹೆಗ್ಡೆ ನೆಕ್ಕಿಲ, ರಮೇಶ್ ಆಚಾರ್ಯ ಕಡೆಂಕಿಲ, ರಾಜೇಂದ್ರ ಶೆಟ್ಟಿ ಕುರೆಲ್ಯ,ಸದಾನಂದ ಸಾಲಿಯಾನ್ ಬಳಂಜ,ಸುರೇಶ್ ಶೆಟ್ಟಿ ಕುರೆಲ್ಯ,ಗಣೇಶ್ ಬಿ.ಕೆ ಬರೆಮೇಲು ಬಳಂಜ,ಸುರೇಶ್ ಪೂಜಾರಿ ಜೈಮಾತ ನಾಲ್ಕೂರು,ಹರೀಶ್ ವೈ ಚಂದ್ರಮ‌ ಬಳಂಜ,ದಿನೇಶ್ ಪೂಜಾರಿ ಅಂತರ ಬಳಂಜ,ಸಂತೋಷ್ ಕುಮಾರ್ ಜೈನ್ ಸಿದ್ದರಹಿತ್ಲು,ಪುರಂದರ ಪೂಜಾರಿ ಪೆರಾಜೆ, ಸತೀಶ್ ಬಿ ದೇವಾಡಿಗ ಬಳಂಜ, ಸಂತೋಷ್ ಪಿ ಕೋಟ್ಯಾನ್ ಬಳಂಜ ಆಯ್ಕೆಯಾಗಿದ್ದಾರೆ.

Leave a Comment

error: Content is protected !!