September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಹಪ್ಪಳ ಸಂಡಿಗೆ, ಉಪ್ಪಿನ ಕಾಯಿ ಮತ್ತು ಮಸಾಲ ಪೌಡರ್ ತಯಾರಿಕೆ ತರಬೇತಿಯ ಸಮಾರೋಪ ಸಮಾರಂಭ

ಉಜಿರೆ : ಆಹಾರ ತಯಾರಿಸುವಾಗ ಯಾವ ರೀತಿಯ ಸುವಾಸನೆಯನ್ನು ಸೂಸುವಂತೆ ನಿಮ್ಮ ಮುಂದಿನ ಸ್ವ ಉದ್ಯೋಗ ಸಹ ಸುತ್ತಮುತ್ತಲಿನ ಪರಿಸರದ ಯುವಜನರಿಗೆ ಉದ್ಯೋಗ ನೀಡುವುದರ ಮೂಲಕ ಸುವಾಸನೆ ನೀಡುವಂತೆ ಆಗಲಿ, ವ್ಯವಹಾರದಲ್ಲಿ ಲಾಭ-ನಷ್ಟವನ್ನು ಸಮಾನವಾಗಿ ಸ್ವೀಕರಿಸಬೇಕು. ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯುವ ರುಡ್ ಸೆಟ್ ಸಂಸ್ಥೆಯಲ್ಲಿ ಜೀವನದ‌ ಪಾಠವನ್ನು ಕಲಿಸಿ ಕೊಡುತ್ತದೆ. ಇದು ಯಾವುದೇ ಕಾಲೇಜಿನ ವಿದ್ಯಾಭ್ಯಾಸದಲ್ಲಿ ಸಿಗುವುದಿಲ್ಲ. ಪೂಜ್ಯ‌ರ ಮಾತಿನಂತೆ ಮೂರರಿಂದ ಐದು ವರ್ಷ ಕಾಲೇಜು ವ್ಯಾಸಂಗ ಮಾಡಿ ಇತರರ ಲೆಕ್ಕ ಬರೆಯುವ ನೌಕರಿಗೆ ಹೋಗುವ ಬದಲು‌ ಸ್ವ ಉದ್ಯೋಗ ಆರಂಭಿಸಿ ನಮ್ಮ ಲೆಕ್ಕ ನಾವು ಬರೆಯುವುದು ಹೆಚ್ಚು ಅರ್ಥಪೂರ್ಣ ಎನ್ನುವ ಹಾಗೇ ನೀವೇಲ್ಲ ನಿಮ್ಮ ಲೆಕ್ಕ ನೀವೇ ಬರೆಯುವ ದಾರಿಯಲ್ಲಿ ನಡೆಯವುದಕ್ಕೆ ತಯಾರಾಗಿದ್ದೀರಿ ನಿಮಗೆಲ್ಲ ಯಶಸ್ಸು ಆಗಲಿ ಎಂದು ಉಜಿರೆ ದಿಶಾ ಸಮೂಹ ಸಂಸ್ಥೆಗಳ ಮಾಲಕರಾದ ರೋಟರಿಯನ್ ಅರುಣ ಕುಮಾರ್ ಅಭಿಪ್ರಾಯಪಟ್ಟರು.

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 10ದಿನಗಳ ಕಾಲ ನಡದೆ ಹಪ್ಪಳ ಸಂಡಿಗೆ, ಉಪ್ಪಿನ ಕಾಯಿ ಮತ್ತು ಮಸಾಲ ಪೌಡರ್ ತಯಾರಿಕೆ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಪ್ರಮಾಣ ಪತ್ರ ವಿತ್ತರಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಅವರು ವಹಿಸಿ, ಮಾತನಾಡಿದರು ಸರಕಾರ ಮತ್ತು ಬ್ಯಾಂಕಿನ ಹೊಸ ಯೋಜನೆಯ ಮೂಲಕ ಸಹಾಯಧನ, ಸಾಲ ಪಡೆದುಕೊಂಡು ಉದ್ಯಮ ಆರಂಭಿಸಿ, ಏನಾದರೂ ಮಾಹಿತಿ ಮಾರ್ಗದರ್ಶನ ಬೇಕಾದರೆ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಕೌಶಲ್ಯ ತರಬೇತಿ‌ ನೀಡಿದ ಶ್ರೀಮತಿ‌ ಲತಾ ಮೈಸೂರು, ಉಪಸ್ಥಿತರಿದ್ದರು

ಅತಿಥಿಗಳನ್ನು ರುಡ್ ಸೆಟ್ ಸಂಸ್ಥೆಯ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಕೆ.ಕರುಣಾಕರ ಜೈನ್ ವಂದಿಸಿದರು.

ಶ್ರೀಮತಿ ಅನುಶ್ರೀ ಮತ್ತು ಶ್ರೀಮತಿ ಮಮತಾ ಪ್ರಾರ್ಥನೆ ಮಾಡಿದರು. ಶ್ರೀಮತಿ ಶಾಂತ, ಸುರೇಶ್, ಫೈಜ್‌ಲ್ ಭಾಷ, ಶ್ರೀಮತಿ ರಮ್ಮಿತಾ ತರಬೇತಿಯ ಅನುಭವ ಹಂಚಿಕೊಂಡರು.

Related posts

ನಡ ಗ್ರಾ.ಪಂ. ಗ್ರಾಮಸಭೆ

Suddi Udaya

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ: ಮುಂಡೂರು ಶಾಲೆಯ ಮುಖ್ಯ ಶಿಕ್ಷಕ ಕಲ್ಲೇಶಪ್ಪ ಕೆ.ಬಿ. ಆಯ್ಕೆ

Suddi Udaya

ದಾವಣಗೆರೆಯಲ್ಲಿ ನಡೆದ ರಾಜ್ಯ ಸಹಕಾರಿ ಸಮಾವೇಶದಲ್ಲಿ ಬೆಳ್ತಂಗಡಿ ಮಂಡಲ ಸಹಕಾರ ಭಾರತಿ ಪದಾಧಿಕಾರಿಗಳು ಭಾಗಿ

Suddi Udaya

ಬೆಳ್ತಂಗಡಿ ಚರ್ಚ್ ರೋಡ್ ಬಳಿ ಚರಂಡಿಗೆ ವಾಲಿದ ಕಾರು

Suddi Udaya

ಉಚಿತ ಬಿದಿರು ಸಸಿಗಳ ವಿತರಣೆ; ಅರ್ಜಿ ಆಹ್ವಾನ

Suddi Udaya

ಬೆಳ್ತಂಗಡಿ ಖಾಸಗಿ ಬಸ್ ನಿಲ್ದಾಣದ ಸಮೀಪ ಮರಣಬಾವಿಯನ್ನು ನಾಚಿಸುವಂತೆ ಗುಂಡಿಗಳ ನಿರ್ಮಾಣ

Suddi Udaya
error: Content is protected !!