30.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಎಸ್. ಡಿ. ಎಂ. (ಸ್ವಾಯತ್ತ) ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿಭಾಗದ ವತಿಯಿಂದ ಸದ್ಭಾವನಾ ದಿವಸ್ ಆಚರಣೆ

ಉಜಿರೆ: ಮಾಜಿ ಪ್ರಧಾನಮಂತ್ರಿಗಳಾದ ರಾಜೀವ್ ಗಾಂಧಿಯವರ ಜನ್ಮದಿನವನ್ನು ಅವರು ಮಾಡಿದ ಸದ್ಭಾವನೆಯ ಕಾರ್ಯಗಳನ್ನು ನೆನಪಿಸಿಕೊಳ್ಳುವುದಕ್ಕಾಗಿ ಎಸ್. ಡಿ. ಎಂ. (ಸ್ವಾಯತ್ತ) ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿಭಾಗದ ವತಿಯಿಂದ ‘ಸದ್ಭಾವನಾ ದಿವಸ’ವನ್ನು ಆ.25 ರಂದು ಆಚರಿಸಲಾಯಿತು.

ಮುಖ್ಯಅತಿಥಿಗಳಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಕನ್ನಡ ವಿಭಾಗದ ಸಹಪ್ರಾಧ್ಯಾಪಕರದ ದಿವಾಕರ್ ಕೊಕ್ಕಡ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಕೃತಿಯ ನಿಯಮ ಮತ್ತು ಭಾರತದ ಜನಸಂಖ್ಯೆಯ ಬಗ್ಗೆ , ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲಗಳ ಬಗ್ಗೆ ಮಾತನಾಡಿದರು. ದೇಶ ಬೆಳವಣಿಗೆಯ ಪಥದಲ್ಲಿ ನಡೆಯಬೇಕಾದರೆ ಭಾರತೀಯರ ನಡವಳಿಕೆ ಹೇಗಿರಬೇಕೆಂದು ಎಳೆ ಎಳೆಯಾಗಿ ಮಾಹಿತಿ ನೀಡಿದರು. ಯಾವುದೇ ಜಾತಿ ಕನಿಷ್ಠವಲ್ಲ ಯಾವುದೇ ಜಾತಿ ಶ್ರೇಷ್ಠವಲ್ಲ, ವೃತ್ತಿಗನುಸಾರವಾಗಿ ಜಾತಿ ಎಂದು ಅರಿವು ಮೂಡಿಸಿದರು. ಕುವೆಂಪುರವರ ಉತ್ತಮ ಕವಿತೆಗಳನ್ನು ಜ್ಞಾಪಿಸಿಕೊಂಡರು. ನಮ್ಮಲ್ಲಿ ಕೆಟ್ಟ ಕೆಲಸಗಳು ನಾಶವಾಗಲಿ ಪರಿಸರವನ್ನು ಬೆಳೆಸುವ ಸೌಹಾರ್ದತೆ ಎಲ್ಲರಲ್ಲಿಯೂ ಬೆಳೆಯಲಿ ಎಂದು ಎಲ್ಲರಿಗೂ ಕರೆ ನೀಡಿದರು.

ಎಸ್ ಡಿ ಎಮ್ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ವಿಭಾಗದ ರೋವರ್ ಸ್ಕೌಟ್ ಲೀಡರ್ ಆಗಿರುವ ಪ್ರಸಾದ್ ಕುಮಾರ್ ಜೈನ್ ಮತ್ತು ರೇಂಜರ್ಸ್ ಲೀಡರ್ ಗಾನವಿ .ಡಿ.ಜೈನ್ ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಂಯೋಜಕ ಶಶಾಂಕ್ ಬಿಜೆ ಸ್ವಾಗತಿಸಿದರು. ವಿದ್ಯಾರ್ಥಿ ಸಂಯೋಜಕಿ ಪುಣ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು. ರೋವರ್ಸ್ ಸ್ಕೌಟ್ಸ್ ಲೀಡರ್ ಪ್ರಸಾದ್ ಕುಮಾರ್ ಜೈನ್ ವಂದಿಸಿದರು.

Related posts

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ. ಪ್ರಾ. ಶಾಲೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ಮಡಂತ್ಯಾರು ಜೇಸಿ ಸಪ್ತಾಹ ವಿಜಯ ಎಸ್.ಸಾಲಿಯಾನ್‌ರಿಗೆ ಉದ್ಯಮರತ್ನ ಪುರಸ್ಕಾರ”

Suddi Udaya

ಜು.23: ದೆಹಲಿಯಲ್ಲಿ ಬಿಎಮ್ಎಸ್ ಇದರ 70ನೇ ವರ್ಷದ ಕಾರ್ಯಕ್ರಮಗಳ ಸಮಾರೋಪ : ಬೆಳ್ತಂಗಡಿ ಶ್ರೀ ಮಂಜುನಾಥೇಶ್ವರ ಸಭಾಭಾವನದಲ್ಲಿ ನೇರಪ್ರಸಾರ

Suddi Udaya

ಕಲ್ಮಂಜ: ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಗಾಲಿಕುರ್ಚಿ ಹಸ್ತಾಂತರ

Suddi Udaya

ಕಳಿಯ ಗ್ರಾಮ ಪಂಚಾಯತ್ ನಲ್ಲಿ ಗ್ರಂಥಾಲಯ ಸಲಹಾ ಸಮಿತಿಯ ಸಭೆ

Suddi Udaya

ಹತ್ಯಡ್ಕ: ಕಾಂಗ್ರೆಸ್ ಬೂತ್ ಕಾರ್ಯಕರ್ತರ ಸಭೆ

Suddi Udaya
error: Content is protected !!