ನಾವೂರು : ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ನಾವೂರು :2022-23 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಆ.30 ರಂದು ಅಮೃತ ಸಭಾಂಗಣದಲ್ಲಿ ನೆರವೇರಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ. ಉಮೇಶ್ ರವರು ವಹಿಸಿದರು.

ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಸಹಾಯಕ ವ್ಯವಸ್ಥಾಪಕರು ಸತೀಶ್ ರಾವ್ , ಬೆಳ್ತಂಗಡಿ ಕೆಎಂಎಫ್ ಪಶು ವೈದ್ಯಾಧಿಕಾರಿ ಡಾ. ಗಣಪತಿ, ವಿಸ್ತರಣಾಧಿಕಾರಿ ಯಮುನಾ, ಉಪಾಧ್ಯಕ್ಷರಾದ ಸೋಮನಾಥ ಬಂಗೇರ , ನಿರ್ದೇಶಕರುಗಳಾದ, ಅನಂತ್ ರಾಜ್ ಜೈನ್ , ಸುಲೈಮಾನ್ , ತನುಜಾ ಶೇಖರ್ , ಪ್ರಮೋದ್ ಸಾಲಿಯಾನ್ , ಜಯಾನಂದ ಸಾಲಿಯಾನ್ , ಪೆರ್ನು ಗೌಡ, ಪ್ರಿಯಾ ಲಕ್ಷ್ಮಣ್ , ಟಿಪಿ ಪೌಲೂಸ್, ಲಲಿತ ಉಪಸ್ಥಿತರಿದ್ದರು.
2022-23 ನೇ ಸಾಲಿನಲ್ಲಿ ಸಂಘವು ರೂ. 11,55,532 ನಿವ್ವಳ ಲಾಭ ಗಳಿಸಿದೆ.

ಈ ಸಂದರ್ಭದಲ್ಲಿ ವರ್ಷದ ಖರ್ಚು ವೆಚ್ಚಗಳ ಆಯಾವಯವನ್ನು ಸಂಘದ ಕಾರ್ಯದರ್ಶಿ ಅಮಿತಾರವರು ಮಂಡಿಸಿದರು,.ಸಂಘದ ವತಿಯಿಂದ ಸಂಘದಲ್ಲಿದ್ದ ಪ್ರತಿಯೊಬ್ಬರಿಗೂ ಸ್ಟೀಲ್ ತೋಪುಗಳನ್ನು ವಿತರಿಸಲಾಯಿತು,


ಸಭೆಯಲ್ಲಿ ಸಂಘದ ಎಲ್ಲಾ ಸಿಬ್ಬಂದಿಗಳು ಹಾಗೂ ನಿರ್ದೇಶಕರುಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು
ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮವನ್ನು ಪ್ರಿಯಾ ಲಕ್ಷ್ಮಣ್ ಸ್ವಾಗತಿಸಿ
ಸಂಘದ ಅಧ್ಯಕ್ಷ ಬಿ, ಉಮೇಶ್, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!