September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ನಾವೂರು : ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಾಮಾನ್ಯ ಸಭೆ

ನಾವೂರು :2022-23 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಆ.30 ರಂದು ಅಮೃತ ಸಭಾಂಗಣದಲ್ಲಿ ನೆರವೇರಿತು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ. ಉಮೇಶ್ ರವರು ವಹಿಸಿದರು.

ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಸಹಾಯಕ ವ್ಯವಸ್ಥಾಪಕರು ಸತೀಶ್ ರಾವ್ , ಬೆಳ್ತಂಗಡಿ ಕೆಎಂಎಫ್ ಪಶು ವೈದ್ಯಾಧಿಕಾರಿ ಡಾ. ಗಣಪತಿ, ವಿಸ್ತರಣಾಧಿಕಾರಿ ಯಮುನಾ, ಉಪಾಧ್ಯಕ್ಷರಾದ ಸೋಮನಾಥ ಬಂಗೇರ , ನಿರ್ದೇಶಕರುಗಳಾದ, ಅನಂತ್ ರಾಜ್ ಜೈನ್ , ಸುಲೈಮಾನ್ , ತನುಜಾ ಶೇಖರ್ , ಪ್ರಮೋದ್ ಸಾಲಿಯಾನ್ , ಜಯಾನಂದ ಸಾಲಿಯಾನ್ , ಪೆರ್ನು ಗೌಡ, ಪ್ರಿಯಾ ಲಕ್ಷ್ಮಣ್ , ಟಿಪಿ ಪೌಲೂಸ್, ಲಲಿತ ಉಪಸ್ಥಿತರಿದ್ದರು.
2022-23 ನೇ ಸಾಲಿನಲ್ಲಿ ಸಂಘವು ರೂ. 11,55,532 ನಿವ್ವಳ ಲಾಭ ಗಳಿಸಿದೆ.

ಈ ಸಂದರ್ಭದಲ್ಲಿ ವರ್ಷದ ಖರ್ಚು ವೆಚ್ಚಗಳ ಆಯಾವಯವನ್ನು ಸಂಘದ ಕಾರ್ಯದರ್ಶಿ ಅಮಿತಾರವರು ಮಂಡಿಸಿದರು,.ಸಂಘದ ವತಿಯಿಂದ ಸಂಘದಲ್ಲಿದ್ದ ಪ್ರತಿಯೊಬ್ಬರಿಗೂ ಸ್ಟೀಲ್ ತೋಪುಗಳನ್ನು ವಿತರಿಸಲಾಯಿತು,


ಸಭೆಯಲ್ಲಿ ಸಂಘದ ಎಲ್ಲಾ ಸಿಬ್ಬಂದಿಗಳು ಹಾಗೂ ನಿರ್ದೇಶಕರುಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು
ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮವನ್ನು ಪ್ರಿಯಾ ಲಕ್ಷ್ಮಣ್ ಸ್ವಾಗತಿಸಿ
ಸಂಘದ ಅಧ್ಯಕ್ಷ ಬಿ, ಉಮೇಶ್, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

Related posts

ಮೂರನೇ ದಿನದ ಕಾರ್ಯಾಚರಣೆಗೆ ಎಸ್.ಐ.ಟಿ ಅಧಿಕಾರಿಗಳ ಜೊತೆ ನೇತ್ರಾವತಿಗೆ ಬಂದ ದೂರುದಾರ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆ ಸದಸ್ಯರ ಭೇಟಿ

Suddi Udaya

ಶಿಶಿಲ ಶ್ರೀ ದುರ್ಗಾಪರಮೇಶ್ವರಿ ಯುವಕಮಂಡಲದ ವತಿಯಿಂದ ಶ್ರಮದಾನ

Suddi Udaya

ಕಲ್ಮಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಮತ್ತು ಪೌಷ್ಟಿಕ ಆಹಾರದ ಕುರಿತು ಮಾಹಿತಿ ಕಾರ್ಯಕ್ರಮ

Suddi Udaya

ಗೇರುಕಟ್ಟೆ: ಕೊರಂಜ ಸ.ಉ.ಪ್ರಾ. ಶಾಲೆಯ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ

Suddi Udaya

ಕಲ್ಮಂಜ: ಬೈಕ್ ಹಾಗೂ ಕಾರು ಡಿಕ್ಕಿ: ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!