ಅಳದಂಗಡಿ : ಜನ ಔಷಧೀಯ ಕೇಂದ್ರದ ಉದ್ಘಾಟನೆ

Suddi Udaya

ಅಳದಂಗಡಿ: ಅಳದಂಗಡಿಯಲ್ಲಿ ಉಷಾ ಶ್ರೀಧರ ಭಂಡಾರಿ ಮಾಲಕತ್ವದಲ್ಲಿ ತಾಲೂಕಿನ 7ನೇ ಭಾರತೀಯ ಜನ ಔಷಧೀಯ ಕೇಂದ್ರದ ಉದ್ಘಾಟನೆಯು ಸೆ.14ರಂದು ನೆರವೇರಿತು.


ಉದ್ಘಾಟನೆಯನ್ನು ವಿಧಾನಸಭಾ ಪರಿಷತ್ ಶಾಸಕ ಪ್ರತಾಪ ಸಿಂಹ ನಾಯಕ್ ನೆರವೇರಿಸಿ ಮಾತನಾಡಿ ಇದೊಂದು ಪ್ರಧಾನಿಗಳ ಕನಸಿನ ಯೋಜನೆ ಹಾಗೂ ಜನಸಾಮಾನ್ಯರಿಗೆ ಸುಲಭದಲ್ಲಿ, ಕಡಿಮೆ ದರದಲ್ಲಿ ಔಷಧ ಸಿಗುವ ಸುಲಭ ದಾರಿಯನ್ನು ಮಾಡಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕೀಯೊನಿಕ್ಸ್ ನ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಮಹಾರಾಷ್ಟ್ರ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಸಚ್ಚಿದಾನಂದ ಶೆಟ್ಟಿ, ಅಳದಂಗಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಸರಸ್ವತಿ, ಸಮೃದ್ಧಿ ಎಂಟರ್ ಪ್ರೈಸಸ್ ನ ಬೆಂಗಳೂರಿನ ಜಯವರ್ಧನ್ ಮತ್ತಿತರು ಉಪಸ್ಥಿತರಿದ್ದರು.

Leave a Comment

error: Content is protected !!