30.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರಾಜ್ಯಮಟ್ಟದ ಸ್ಪೆಲ್ ಬೀ ಸ್ಪರ್ಧೆ: ಹೋಲಿ ರಿಡೀಮರ್ ಆಂ.ಮಾ. ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಬೆಳ್ತಂಗಡಿ: ‘ವಿನ್ ನ್ಯಾಶನಲ್ ಸ್ಪೆಲ್ ಬೀ’ ಯವರು ಬೆಂಗಳೂರಿನ ಅಶೋಕ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಜಿಯಾ ಬ್ರಿಯೋನ ಲೋಬೊ (3ನೇ) 9ನೇ ಶ್ರೇಣಿ, ಮಹಮ್ಮದ್ ಸಮೀರ್ (9ನೇ) 13ನೇ ಶ್ರೇಣಿ, ಆಧ್ಯಾ ಬಿ ಆರ್ (3ನೇ)14ನೇ ಶ್ರೇಣಿ, ಭುವಿ ಕೆ ಎಲ್ (3ನೇ) 20ನೇ ಶ್ರೇಣಿ, ಪ್ರಜ್ಞ ಪಿ ವಿ (8ನೇ) 22ನೇ ಶ್ರೇಣಿ, ಅವಿನ್ ಎಸ್ (6ನೇ) 23ನೇ ಶ್ರೇಣಿ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಯ ಘನತೆಯನ್ನು ಹೆಚ್ಚಿಸಿದ್ದಾರೆ. ತ್ರಿಶಾ ಎಂ (8ನೇ) 31ನೇ ಶ್ರೇಣಿ, ಅರ್ವಿನ್ ಬೆನ್ನಿಸ್ (7ನೇ) 32ನೇ ಶ್ರೇಣಿ, ಮಹಮ್ಮದ್ ಮಾಝಿನ್ (4ನೇ) 44ನೇ ಶ್ರೇಣಿ ಹಾಗೂ ಅಕ್ಷತಾ ಎಂ ಡಿ (4ನೇ) 54 ಪಡೆದಿದ್ದಾರೆ.


ಹಾಗೆಯೇ ವಿಝ್ ಸ್ಪರ್ಧೆಯಲ್ಲಿ ವಿಯೋಲ ಡಿಸೋಜ (8ನೇ) 33ನೇ ಶ್ರೇಣಿ, ಸುಝಾನ ಸೆರಾವೋ(7ನೇ) 46ನೇ ಶ್ರೇಣಿ, ಆಧ್ಯಾ ಬಿ ಆರ್ (3ನೇ) 27ನೇ ಶ್ರೇಣಿ ಪಡೆದಿದ್ದಾರೆ. ಸಹಶಿಕ್ಷಕಿಯರಾದ ಶ್ರೀಮತಿ ಎಲ್ವಿಟಾ ಪಾಯ್ಸ್ , ಶ್ರೀಮತಿ ದಿವ್ಯಾ ಜಿ, ಶ್ರೀಮತಿ ಸುಮಿತ್ರಾ ಸಹಕರಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ವಂ ಫಾ ಕ್ಲಿಫರ್ಡ್ ಪಿಂಟೋರವರು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Related posts

ಅಗ್ರಿಲೀಫ್ ಗೆ ದಾಖಲೆಯ ರೂ. 20 ಕೋಟಿ ಹೂಡಿಕೆ : 2 ವರ್ಷಗಳಲ್ಲಿ ರೂ. 100 ಕೋಟಿ ವ್ಯವಹಾರದ ಗುರಿ: ಗ್ರಾಮೀಣ ಭಾಗದ ವಿದೇಶಿ ರಫ್ತು ಸಂಸ್ಥೆಯ ಅಪೂರ್ವ ಸಾಧನೆ

Suddi Udaya

ಕೊಕ್ಕಡ ಅಮೃತ ಗ್ರಾ.ಪಂ. ನಿಂದ ಅರ್ಹ ಫಲಾನುಭವಿಗಳಿಗೆ ನೀರಿನ ಡ್ರಮ್ ವಿತರಣೆ

Suddi Udaya

ಉಜಿರೆ: ಅಜಿತ್ ನಗರ ನಿವಾಸಿ ವಿಲ್ಫ್ರೆಡ್ ಡಿಸೋಜಾ ನಿಧನ

Suddi Udaya

ಕರುಣಾಶ್ರಯ ಸೇವಾ ಟ್ರಸ್ಟ್‌ನಿಂದ ವಾರದ ಒಂದು ದಿನದ ಸೇವಾ ಕಾರ್ಯಕ್ರಮ: ಗುಂಡೂರಿ ಶ್ರೀ ಗುರು ಚೈತನ್ಯ ಸೇವಾಶ್ರಮಕ್ಕೆ ದಿನಸಿ ಸಾಮಾಗ್ರಿ ವಿತರಣೆ

Suddi Udaya

ಬೆಳ್ತಂಗಡಿ: ಮೆಸ್ಕಾಂ ಇಲಾಖೆ ವತಿಯಿಂದ ವಿದ್ಯುತ್ ಬಿಲ್ ವಸೂಲಾತಿ ಅಭಿಯಾನ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಅಡ್ಡ ಬಂದ ಒಂಟಿ ಸಲಗ

Suddi Udaya
error: Content is protected !!