22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶಿರ್ಲಾಲು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಹಾಸಭೆ: ವಾರ್ಷಿಕ 150 ಕೋಟಿ ವ್ಯವಹಾರ ಮಾಡಿ 69 ಲಕ್ಷ ನಿವ್ವಳ ಲಾಭ ಗಳಿಸಿದ್ದೇವೆ: ನವೀನ್ ಕೆ ಸಾಮಾನಿ

ಶಿರ್ಲಾಲು: ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶಿರ್ಲಾಲು ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ನವೀನ್ ಕೆ. ಸಾಮಾನಿಯವರ ಅಧ್ಯಕ್ಷತೆಯಲ್ಲಿ ನವೋದಯ ಸಭಾಭವನದಲ್ಲಿ ಸೆ. 16 ರಂದು ಪಡೆಯಿತು.

ಸಂಘವು ವರದಿ‌ ಸಾಲಿನಲ್ಲಿ 150 ಕೋಟಿ ವ್ಯವಹಾರ ನಡೆಸಿ ಸುಮಾರು 69 ಲಕ್ಷ ನಿವ್ವಳ ಲಾಭ ಗಳಿಸಿದೆ. ಜೊತೆಗೆ ಸಂಘವು ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದು ಈ ವರ್ಷ ಮೃತಪಟ್ಟ ರೈತ ಸದಸ್ಯರ ಕುಟುಂಬಕ್ಕೆ ರೂ 37 ಸಾವಿರ ಸಹಾಯಧನ ನೀಡಲಾಗಿದೆ ಎಂದು ಸಂಘದ ಅಧ್ಯಕ್ಷ ನವೀನ್ ಕೆ ಸಾಮಾನಿ ಹೇಳಿದರು.

ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ತಾರಾನಾಥ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮ್ಮಾಜಿ ಕೋಟ್ಯಾನ್,ಕೆ.ನಾರಾಯಣ ರಾವ್,ಆನಂದ ಸಾಲಿಯಾನ್, ಶ್ರೀಮತಿ ಸುಮಿತ್ರಾ ಬಿ ಹೆಗ್ಡೆ,ಶ್ರೀಮತಿ ಮಲ್ಲಿಕಾ,ಶಿವಪ್ಪ ಪೂಜಾರಿ, ರಾಮ ಬಂಗೇರಾ, ಅಶೋಧರ ಎನ್,ಶೀನಪ್ಪ ಎಂ,ಶ್ರೀಮತಿ ಸುಶೀಲಾ, ಸುಧೀರ್ ಪಿ ಯಚ್, ನಿತ್ಯಾನಂದ ಶೆಟ್ಟಿ, ವಲಯ ಮೇಲ್ವಿಚಾರಕ ಸಂದೇಶ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಠೇವಣಿದಾರರಾದ ನೇಮು, ಹಿರಿಯ ಸದಸ್ಯರಾದ ಕೃಷ್ಣಪ್ಪ ಮೂಲ್ಯ,ಪೂವಪ್ಪ ನಾಯ್ಕ,ಪಿ.ಎಂ ಸನ್ನಿ,ಕೇಶವ ಮಡಿವಾಳ,ತಿಮ್ಮಯ್ಯ ಆಚಾರ್ಯ,ಅಣ್ಣು ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

Related posts

ಮಿತ್ತಬಾಗಿಲು: ವಳಗುಡ್ಡೆ ನಿವಾಸಿ ಕೃಷ್ಣ ಗೌಡ ನಿಧನ

Suddi Udaya

ಕುತೂಹಲ ಕೆರಳಿಸಿದ ಮಾಲಾಡಿ ಗ್ರಾ. ಪಂ. ಚುನಾವಣೆ: ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಜಿದ್ದಾಜಿದ್ದಿನ ಪೈಪೋಟಿ,: ಅಧ್ಯಕ್ಷರಾಗಿ ಪುನೀತ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ‍ಸೆಲೆಸ್ಟಿನ್ ಡಿಸೋಜ ಆಯ್ಕೆ

Suddi Udaya

ಪೊಸಂದೋಡಿ ಹರಿಕೃಪಾ ಪಿ. ದುಗ್ಗಪ್ಪ ಗೌಡ ಮತ್ತು ಶ್ರೀಮತಿ ಜಾಜೀವಿಯವರ ವೈವಾಹಿಕ ಜೀವನದ ‘ ಸುವರ್ಣ ಸಂಭ್ರಮ’: ಆದಿಚುಂಚನಗಿರಿ ಶಾಖಾ ಮಠಾ ಧೀಶರಾದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರಿಂದ ಆಶೀರ್ವಚನ

Suddi Udaya

ಬೆಳ್ತಂಗಡಿ ಪಟ್ಟಣ ಪಂಚಾಯತ್ 8 ಮಂದಿ ಪೌರ ಕಾರ್ಮಿಕರ ನೇರ ನೇಮಕಾತಿ

Suddi Udaya

ಉಜಿರೆ: ಗ್ರಾ.ಪಂ ಮಾಜಿ ಸದಸ್ಯ ಮುಹಮ್ಮದ್‌ ಕುಂಞಿ ನಿಧನ

Suddi Udaya

ಉದ್ಯಮಿ ಸುದೀಪ್ ರೈ ಆತ್ಮಹತ್ಯೆಗೆ ಶರಣು

Suddi Udaya
error: Content is protected !!