25.1 C
ಪುತ್ತೂರು, ಬೆಳ್ತಂಗಡಿ
August 5, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳೆಂಜ: ಮನೆ ಪಂಚಾಂಗ ದೂಡಿ ಹಾಕಿದ ಪ್ರಕರಣ: ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಪ್ರಕರಣ ದಾಖಲು

ಕಳೆಂಜ: ಇಲ್ಲಿಯ ಅಮ್ಮಿನಡ್ಕ ಎಂಬಲ್ಲಿ ಅರಣ್ಯ ಇಲಾಖೆಯವರು ಲೋಲಾಕ್ಷ ಎಂಬವರ ನೂತನ ಮನೆ ನಿಮಾರ್ಣದ ಪಂಚಾಂಗ ಕೆಡವಿ ಹಾಕಿರುವ ಪ್ರಕರಣದಲ್ಲಿ ಅವರ ಪತ್ನಿ ಶ್ರೀಮತಿ ರಕ್ಷಿತಾ ಅವರು ಧರ್ಮಸ್ಥಳ ಪೊಲೀಸರಿಗೆ ಅ.6 ರಂದು ನೀಡಿರುವ ದೂರಿನ ಆಧಾರದಲ್ಲಿ ಕಳೆಂಜ ವಲಯದ ಅರಣ್ಯಾಧಿಕಾರಿ ಪ್ರಶಾಂತ್ ಹಾಗೂ ಸಿಬ್ಬಂದಿಯವರ ಮೇಲೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ರಕ್ಷಿತಾರವರು ಠಾಣೆಗೆ ನೀಡಿರುವ ದೂರಿನಲ್ಲಿ ನಾವು ಹೊಸ ಮನೆ ನಿರ್ಮಿಸಲು ಕೂಲಿ ಕೆಲಸದವರೊಂದಿಗೆ ಪಂಚಾಂಗವನ್ನು ಕಟ್ಟುತ್ತಿರುವ ಸಮಯ ಕಳೆಂಜ ವಲಯ ಅರಣ್ಯಾಧಿಕಾರಿ ಪ್ರಶಾಂತ್ ಮತ್ತು ಸಿಬ್ಬಂದಿಯವರು ಮನೆಯವರನ್ನು ದೂಡಿ ಹಾಕಿ ಅವಾಚ್ಯ ಶಬ್ಧಗಳಿಂದ ಬೈದು ಮಾನಭಂಗಕ್ಕೆ ಯತ್ನಿಸಿದರಲ್ಲದೆ, ಇನ್ನು ಮುಂದಕ್ಕೆ ಬೇರೆ ಮನೆ ಕಟ್ಟಿದರೆ ಮನೆಗೆ ಬೆಂಕಿ ಕೊಟ್ಟು ದ್ವಂಸಗೊಳಿಸುತ್ತೇವೆ ಎಂದು ಬೆದರಿಕೆಯನ್ನು ಹಾಕಿರುವುದಾಗಿ ಆರೋಪಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ವೆನ್ಲಾಕ್‌ ರಕ್ಷಾ ಸಮಿತಿ ಸಭೆಯಲ್ಲಿ ಕರೀಂ ಗೇರುಕಟ್ಟೆ, ಜಯರಾಮ ಭಾಗಿ

Suddi Udaya

ಬೆಳ್ತಂಗಡಿ: ಪ್ರಭಾರ ಶಿಕ್ಷಣಾಧಿಕಾರಿ ಕಾರಿನ ಮೇಲೆ ಮರ ಬಿದ್ದು ಹಾನಿ

Suddi Udaya

ಮತದಾರರ ಪಟ್ಟಿ ಮ್ಯಾಪಿಂಗ್ ಮಾಡಿಸಿ-ಜಿಲ್ಲಾ ಚುನಾವಣಾಧಿಕಾರಿ

Suddi Udaya

ಆ.15: ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ‘ವಿಜ್ಞಾನ – ವಿಸ್ಮಯ ಮತ್ತು ಕುತೂಹಲ’ – ವಿಮರ್ಶಾ ಕಾರ್ಯಾಗಾರ

Suddi Udaya

ಅಳದಂಗಡಿ ಮಹಾಗಣಪತಿ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಡಾ. ರಮೇಶ್ ನೇಮಕ

Suddi Udaya

ಬಿ ಎಸ್ ವೈ ಅಭಿಮಾನೋತ್ಸವ ಸಮಾರಂಭಕ್ಕೆ ತೆರಳಿದ ಬೆಳ್ತಂಗಡಿ ಬಿಜೆಪಿ ಯುವಮೋರ್ಚಾ ತಂಡ

Suddi Udaya
error: Content is protected !!