28 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಮುಂಡಾಜೆ : ಸಿಡಿಲು ಬಡಿದು ಮನೆಗೆ ಹಾನಿ, ಅಪಾರ ನಷ್ಟ

ಬೆಳ್ತಂಗಡಿ; ಅ.9 ರಂದು ಸಂಜೆ ಸಿಡಿಲು ಮಿಂಚು ಗಾಳಿ ಸಹಿತ ಸುರಿದ ಭಾರೀ ಮಳೆಗೆ ಮುಂಡಾಜೆ ಗ್ರಾಮದಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದರೆ ಹಲವೆಡೆ ಮನೆಗೆ ಸಿಡಿಲು ಬಡಿದು ಭಾರೀ ಹಾನಿಯಾಗಿದೆ.
ಮುಂಡಾಲ್ಬೆಟ್ಟು ಸುರೇಶ್ ಗೌಡ ಎಂಬವರ ಮನೆಗೆ ಸಿಡಿಲು ಬಡಿದು ಸ್ವಿಚ್ ಬೋರ್ಡ್‌ಗಳಿಗೆ ಹಾನಿಯಾಗಿದೆ . ಮನೆಯ ಗೋಡೆ ಬಿರುಕು ಬಿಟ್ಟಿದೆ. ಕಾರು ಪಾರ್ಕಿಂಗ್ ನ ಪಿಲ್ಲರ್ ಕಂಬದ ಬುಡ ಸಿಡಿಲಾಘಾತಕ್ಕೆ ಸಿಮೆಂಟ್ ಸಮೇತ ಕಿತ್ತು ಬಂದಿದ್ದು ಬಾವಿಯ ಕಟ್ಟೆಗೂ ಹಾನಿಯಾಗಿದೆ. ನೀರಿನ ಪಂಪಿನ ಕವರ್ ಛಿದ್ರಗೊಂಡಿದ್ದು ಮನೆಯ ಇನ್ವರ್ಟರ್, ಫ್ಯಾನ್‌ಗಳು, ಬಲ್ಬುಗಳು ಸಂಪೂರ್ಣ ಕೆಟ್ಟು ಹೋಗಿದೆ. ಮನೆಯ ಆವರಣ ಗೋಡೆಯು ಕುಸಿತಗೊಂಡಿದೆ.

ಸುರೇಶ್ ಗೌಡ ಅವರು ಉಜಿರೆ ಎಸ್‌ಡಿಎಂ ಡಿಪ್ಲೋಮಾ ಕಾಲೇಜಿನ ಸಿಬ್ಬಂದಿ, ಅವರ ಪತ್ನಿ‌ ಭಾರತಿ ಅವರು ನಡ ಪಂಚಾಯತ್ ನಲ್ಲಿ ಗುಮಾಸ್ತೆಯಾಗಿದ್ದು ಇಬ್ಬರೂ ಕರ್ತವ್ಯಕ್ಕೆ ಹೋಗಿದ್ದರು. ಮಕ್ಕಳು ಶಾಲೆಗೆ ಹೋಗಿದ್ದರಿಂದ ಮನೆಯಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ಹೆಚ್ಚಿನ‌ ಅನಾಹುತ ತಪ್ಪಿದೆ.

Related posts

ಚಿಕ್ಕಮಗಳೂರಿನ ವಕೀಲ ಪ್ರೀತಮ್ ರವರ ಮೇಲೆ ಹಲ್ಲೆ ಮಾಡಿರುವ ಪೊಲೀಸರನ್ನು ಬಂಧಿಸುವಂತೆ ಒತ್ತಾಯಿಸಿ ಬೆಳ್ತಂಗಡಿ ನ್ಯಾಯಾಲಯದ ಸಂಕೀರ್ಣದಲ್ಲಿ ಪ್ರತಿಭಟನೆ

Suddi Udaya

ಮುಂಡಾಜೆ ಗ್ರಾಮ ಪಂಚಾಯತ್ ನಲ್ಲಿ ಜೀವ ಜಲ ಜಾಗೃತಿ ಮಾಹಿತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಗೆ ಪ್ರಾಂತ್ಯಾಧ್ಯಕ್ಷರ ಭೇಟಿ; ಪ್ರತಿಭಾ ಪುರಸ್ಕಾರ

Suddi Udaya

ಎಸ್. ಡಿ. ಎಂ ನ ನವೀಕೃತ ಡೀನ್ ಚೇಂಬರ್ ಗೆ ಚಾಲನೆ

Suddi Udaya

ಪೆಟ್ರೋಲ್ ಸುರಿದು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಸಾಧಕರಿಗೆ ಸನ್ಮಾನ

Suddi Udaya
error: Content is protected !!