ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಚೇಂಬರ್ ವತಿಯಿಂದ ಗಾಲಿ ಕುರ್ಚಿ ಹಸ್ತಾಂತರ

Suddi Udaya

ಬೆಳ್ತಂಗಡಿ : ನಾವೂರು ಗ್ರಾಮದ ಪಾದೆ ಮನೆ ನಿವಾಸಿ ರಮಾನಂದ ಪೂಜಾರಿಯವರು ಅಡಿಕೆ ಮರ ಕಡಿಯುವಾಗ ಆಕಸ್ಮಿಕವಾಗಿ ಮರವು ಕುತ್ತಿಗೆಯ ಮೇಲೆ ಬಿದ್ದು ಮೂಳೆಗೆ ಗಾಸಿಯಾಗಿರುವುದು. ಇದರಿಂದ ನಡೆಯಲಾಗದ ಪರಿಸ್ಥಿತಿ ಉಂಟಾಗಿದೆ. ಇದನ್ನು ಮನಗಂಡ ಮಂಜುಶ್ರೀ ಸೀನಿಯರ್ ಚೇಂಬರ್ ನ ಸ್ಥಾಪಕ ಅಧ್ಯಕ್ಷ ಪ್ರಮೋದ ಆರ್ ನಾಯಕ್, ಭರತ್ ಕುಮಾರ್ ಇಂದಬೆಟ್ಟು, ರಾಜಾರಾಮ್ , ಮತ್ತು ವಿಶ್ವನಾಥ್ ಶೆಟ್ಟಿ ಇವರು ಅವರ ಮನೆಗೆ ತೆರಳಿ ಸಂಸ್ಥೆಯ ವತಿಯಿಂದ ಗಾಲಿ ಕುರ್ಚಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ತನುಜಾ ಶೇಖರ್ ಹಾಗೂ ಸ್ಥಳೀಯರಾದ ಗಣೇಶ್ ಕನ್ನಾಲು, ಸುರೇಶ್, ಸೆಬೇಸ್ಟಿನ್, ಪೌಲೌಸ್, ಪ್ರಕಾಶ್, ದೇಜಪ್ಪ ಗೌಡ, ಪ್ರೇಮ ಉಮೇಶ್ ಉಪಸ್ಥಿತರಿದ್ದರು.

Leave a Comment

error: Content is protected !!