ಬೆಳ್ತಂಗಡಿ 45ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವಕ್ಕೆ ಚಾಲನೆ

Suddi Udaya

ಬೆಳ್ತಂಗಡಿ: 45ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅ.20ರಿಂದ 23ರವರೆಗೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ ಪಿನಾಕಿ ಬೆಳ್ತಂಗಡಿಯಲ್ಲಿ ಗಣೇಶ್ ಐತಾಳ್ ಪಂಜಿರ್ಪು ರವರ ಪೌರೋಹಿತ್ಯದಲ್ಲಿ ನಡೆಯಲಿದೆ.

ಇಂದು ಬೆಳಿಗ್ಗೆ ಗಣಹೋಮ, ಶ್ರೀ ಶಾರದ ದೇವಿಯ ಪ್ರತಿಷ್ಠೆ, ಕಣಿಯೂರು ರೈತ ಬಂಧು ಆಹಾರೋಧ್ಯಮ ಮಾಲಕ ಶಿವಶಂಕರ್ ನಾಯಕ್ ದೀಪ ಪ್ರಜ್ವಲನೆ ಗೈದರು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಮುಗುಳಿ ನಾರಾಯಣರಾವ್, ಅಧ್ಯಕ್ಷರಾದ ಮುರಳಿಧರ, ಕಾರ್ಯದರ್ಶಿ ನಾರಾಯಣ್ ಶೆಟ್ಟಿ, ಉಪಾಧ್ಯಕ್ಷರಾದ ಸುರೇಂದ್ರ ಕೋಟ್ಯಾನ್, ಸಂಜೀವ. ಎನ್, ಕೋಶಾಧಿಕಾರಿ ಜನಾರ್ಧನ, ಗೌರವ ಸಲಹೆಗಾರದ ಶಂಕರ ಹೆಗ್ಡೆ, ಅರ್ಚಕರಾದ ಗಣೇಶ್ ಐತಾಲ್, ಸದಸ್ಯರಾದ ಕುಮಾರ್ ದಾಸ್ ಮತ್ತು ಜೀವಿ ಹರೀಶ್ ಉಪಸ್ಥಿತರಿದ್ದರು.

ಸಂಜೆ ಹುಣ್ಸೆಕಟ್ಟೆ ಶ್ರೀರಾಮ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ನಂತರ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ.

Leave a Comment

error: Content is protected !!