ಸುಲ್ಕೇರಿ ಮಹಾಮಾಯಿ ದೇವಸ್ಥಾನಕ್ಕೆ ಬ್ರಹ್ಮಗಿರಿ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದಿಂದ ಚೆಂಡೆ, ದೀಪಾ, ಮತ್ತು ಕಹಳೆ ಸಮರ್ಪಣೆ

Suddi Udaya

ಸುಲ್ಕೇರಿ : ಸುಲ್ಕೇರಿ ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘ (ರಿ) ಬ್ರಹ್ಮಗಿರಿ ಇವರಿಂದ ಗ್ರಾಮದ ಶ್ರೀ ಮಹಾಮಾಯಿ ದೇವಸ್ಥಾನ ಭಂಡಾರಗೋಳಿಗೆ ನವರಾತ್ರಿ ಹಬ್ಬದ ನಿಮಿತ್ತ ಗ್ರಾಮದ ಎಲ್ಲಾ ಬಿಲ್ಲವ ಭಾಂದವರ ಪರವಾಗಿ, ಕಾಣಿಕೆ ರೂಪದಲ್ಲಿ ಚೆಂಡೆ, ದೀಪಾ, ಮತ್ತು ಕಹಳೆಯನ್ನು ಭಕ್ತಿಪೂರ್ವಕವಾಗಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸಮಿತಿಯ ಸದಸ್ಯರ ಉಪಸ್ಥಿತಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರಿಗೆ ಹಸ್ತಾಂತರ ಮಾಡಲಾಯಿತು.

Leave a Comment

error: Content is protected !!