ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಕ್ಷೇಮ ನಿಧಿ 9ನೇ ಸಹಾಯಧನ ಹಸ್ತಾಂತರ

Suddi Udaya

ಬೆಳ್ತಂಗಡಿ : ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಇದರ ಕ್ಷೇಮ ನಿಧಿಯ 9 ನೇ ಸಹಾಯಧನ ರೂ 5000/ ವನ್ನು ಗುರಿಪಳ್ಳ ಪಾರ್ಕ್ ಉಜಿರೆಯ ಸದಸ್ಯರಾದ ವಸಂತ ಭಂಡಾರಿ ಅವರಿಗೆ ಕ್ಷೇಮ ನಿಧಿ ಸಹಾಯಧನವನ್ನು ರಿಕ್ಷಾ ಚಾಲಕ ಮಾಲಕರ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಇದರ ಉಪಾಧ್ಯಕ್ಷರಗಳಾದ ರಮೇಶ್ ಬೊಳ್ಳಿ ಆಟೋ ಉಜಿರೆ, ಸುಧಾಕರ ಗೌಡ ಉಜಿರೆ ಸಹಾಯಧನವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಗುರಿಪಳ್ಳ ರಿಕ್ಷಾ ಚಾಲಕ ಸಂಘದ ಅಧ್ಯಕ್ಷರಾದ ರಾಮಣ್ಣ ಗೌಡ, ಕಾರ್ಯದರ್ಶಿ ನವೀನ್ ಗೌಡ, ಉಪಾಧ್ಯಕ್ಷರಾದ ಸಂಜೀವ ಗೌಡ ಹಾಗೂ ಉಜಿರೆ ವಲಯದ ಕಾರ್ಯದರ್ಶಿ ಲಿಂಗಪ್ಪ ನಾಯ್ಕ. ರಮೇಶ್ ಪೂಜಾರಿ ಉಜಿರೆ ಹಾಗೂ ಇತರ ಪ್ರಮುಖರು ಮತ್ತು ಸದಸ್ಯರು ಉಪಸ್ಥಿತರಿದ್ದರು.

Leave a Comment

error: Content is protected !!