25.5 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಲ್ಲಿಕೊಟೆ(ಕೋಝಿ ಕೋಡ್) ನಲ್ಲಿ ಜೊಜಿಲಾ ದಿನಾಚರಣೆ : ನಿವೃತ್ತ ಯೋಧ ಡಾ. ಗೋಪಾಲ ಕೃಷ್ಣ ಕಾಂಚೋಡು ಭಾಗಿ

ಬೆಳ್ತಂಗಡಿ: ಕಲ್ಲಿಕೊಟೆ(ಕೋಝಿ ಕೋಡ್) ನಲ್ಲಿ ಅಕ್ಟೋಬರ್ 31ಮತ್ತು ನವಂಬರ್ 1ರಂದು ನಡೆದ
ಜೊಜಿಲಾ ದಿನಾಚರಣೆಯಲ್ಲಿ ಮುಖ್ಯ ಅತಿಥಿ ಯಾಗಿ ನಿವೃತ್ತ ಯೋಧ ಡಾ. ಗೋಪಾಲ ಕೃಷ್ಣ ಕಾಂಚೋಡು ಭಾಗವಹಿಸಿದ್ದರು.

ಭಾರತದ ಸೇನಾಪಡೆಯ11ನೇ ತೋಪುಖಾನಾ (ಆರ್ಟಿಲ್ಲರಿ) ಸೇನಾಪಡೆಯು ಜೊಜಿಲಾ ಬೆಟ್ಟಪ್ರದೇಶಗಳಲ್ಲಿ ಅತಿಕ್ರಮವಾಗಿ ಒಳನುಸುಳಿ ಕುಳಿತ್ತಿದ್ದ ಪಾಕಿಸ್ತಾನದ ಸೇನೆಯನ್ನು ಹೊರಹಾಕಿ ಆಯಕಟ್ಟಿನ ಈ ಪ್ರದೇಶವನ್ನು ಭಾರತದ ಸ್ವಾಧೀನ ಪಡಿಸಿಕೊಂಡ ಸೇನಾ ಕಾರ್ಯಾಚರಣೆಯ ಘಟಕಗಳನ್ನು ಜೊಜಿಲಾ ರೆಜಿಮೆಂಟ್ ಎಂಬ ಬಿರುದಿನೊಂದಿಗೆ ಭಾರತ ಸರಕಾರದಿಂದ ಗುರುತಿಸಲ್ಪಟ್ಟ ದಿನವನ್ನು ಜೊಜಿಲಾ ದಿನವನ್ನಾಗಿ ಆಚರಿಸಲ್ಪಡುತ್ತದೆ.

ಈ ಕಾರ್ಯಾಚರಣೆಯಲ್ಲಿ ನಿವೃತ್ತ ಯೋಧ ಡಾ. ಗೋಪಾಲ ಕೃಷ್ಣ ಕಾಂಚೋಡು ಅವರು ಸೇವೆಸಲ್ಲಿಸಿದ ರೆಜಿಮೆಂಟ್ ಬಹಳ ಪ್ರಮುಖ ಪಾತ್ರ ನಿರ್ವಹಿಸಿದ್ದು, ಅದರ ಸ್ಮರಣಾರ್ಥ ಕಾರ್ಯಾಚರಣೆ ಯಲ್ಲಿ ದೇಶಕ್ಕಾಗಿ ಅಮರರಾದವರನ್ನು ನೆನಪಿಸುತ್ತ ಅವರೆಲ್ಲರಿಗೆ ಶ್ರಧ್ಜಾಂಜಲಿ ಸಲ್ಲಿಸಿ ಆಚರಿಸುವ ದಿನವನ್ನು ಈ ವರ್ಷ ಕೇರಳದಕಲ್ಲಿಕೊಟೆ(ಕೋಝಿಕೋಡ್) ನಲ್ಲಿ ಆಚರಿಸಲಾಯಿತು.

Related posts

ಮೊಗ್ರು ಕಡಮ್ಮಾಜೆ ಫಾರ್ಮ್ಸ್ ನಲ್ಲಿ 3 ದಿನ ನಡೆಯಲಿರುವ ಮೀನು ಮೇಳಕ್ಕೆ ಚಾಲನೆ: ವಿಶೇಷ ಆಕರ್ಷಣೆ ಮೀನಿಗೆ ಗಾಳ ಹಾಕುವ ಸ್ಪರ್ಧೆ

Suddi Udaya

ಬೆಳ್ತಂಗಡಿ ವರ್ತಕರ ಸಂಘದಿಂದ ವೃದ್ದಾಶ್ರಮಕ್ಕೆ ಭೇಟಿ,ಗೃಹೋಪಯೋಗಿ ವಸ್ತುಗಳ ಹಸ್ತಾಂತರ

Suddi Udaya

ಧರ್ಮಸ್ಥಳ: ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದಲ್ಲಿ ಗಣರಾಜ್ಯೋತ್ಸವ ಆಚರಣೆ – ಭಾರತ ವಿಶ್ವಗುರುವಾಗಬೇಕು : ಎಚ್.ಎನ್. ಚಂದ್ರಶೇಖರ್

Suddi Udaya

ಕೊಯ್ಯೂರು : ಮಹಿಳೆಯ ಕುತ್ತಿಗೆಯಲ್ಲಿದ್ದ 32 ಗ್ರಾಂ ಚಿನ್ನದ ಕರಿಮಣಿ ಸರ ಎಳೆದು ಪರಾರಿ

Suddi Udaya

ಜ.4-5: ಬರೆಂಗಾಯ ಸ.ಉ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ ಕಾರ್ಯಕ್ರಮ

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಬೆಳ್ತಂಗಡಿ ಕೌಶಲ್ಯಭಿವೃದ್ಧಿ ತರಬೇತಿಯಡಿ ಬಟ್ಟೆ ಚೀಲ ಮತ್ತು ಎಂಬ್ರಾಯಿಡರಿ ಉಚಿತ ತರಬೇತಿ ಕಾರ್ಯಾಗಾರ

Suddi Udaya
error: Content is protected !!