July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಲ್ಲಿಕೊಟೆ(ಕೋಝಿ ಕೋಡ್) ನಲ್ಲಿ ಜೊಜಿಲಾ ದಿನಾಚರಣೆ : ನಿವೃತ್ತ ಯೋಧ ಡಾ. ಗೋಪಾಲ ಕೃಷ್ಣ ಕಾಂಚೋಡು ಭಾಗಿ

ಬೆಳ್ತಂಗಡಿ: ಕಲ್ಲಿಕೊಟೆ(ಕೋಝಿ ಕೋಡ್) ನಲ್ಲಿ ಅಕ್ಟೋಬರ್ 31ಮತ್ತು ನವಂಬರ್ 1ರಂದು ನಡೆದ
ಜೊಜಿಲಾ ದಿನಾಚರಣೆಯಲ್ಲಿ ಮುಖ್ಯ ಅತಿಥಿ ಯಾಗಿ ನಿವೃತ್ತ ಯೋಧ ಡಾ. ಗೋಪಾಲ ಕೃಷ್ಣ ಕಾಂಚೋಡು ಭಾಗವಹಿಸಿದ್ದರು.

ಭಾರತದ ಸೇನಾಪಡೆಯ11ನೇ ತೋಪುಖಾನಾ (ಆರ್ಟಿಲ್ಲರಿ) ಸೇನಾಪಡೆಯು ಜೊಜಿಲಾ ಬೆಟ್ಟಪ್ರದೇಶಗಳಲ್ಲಿ ಅತಿಕ್ರಮವಾಗಿ ಒಳನುಸುಳಿ ಕುಳಿತ್ತಿದ್ದ ಪಾಕಿಸ್ತಾನದ ಸೇನೆಯನ್ನು ಹೊರಹಾಕಿ ಆಯಕಟ್ಟಿನ ಈ ಪ್ರದೇಶವನ್ನು ಭಾರತದ ಸ್ವಾಧೀನ ಪಡಿಸಿಕೊಂಡ ಸೇನಾ ಕಾರ್ಯಾಚರಣೆಯ ಘಟಕಗಳನ್ನು ಜೊಜಿಲಾ ರೆಜಿಮೆಂಟ್ ಎಂಬ ಬಿರುದಿನೊಂದಿಗೆ ಭಾರತ ಸರಕಾರದಿಂದ ಗುರುತಿಸಲ್ಪಟ್ಟ ದಿನವನ್ನು ಜೊಜಿಲಾ ದಿನವನ್ನಾಗಿ ಆಚರಿಸಲ್ಪಡುತ್ತದೆ.

ಈ ಕಾರ್ಯಾಚರಣೆಯಲ್ಲಿ ನಿವೃತ್ತ ಯೋಧ ಡಾ. ಗೋಪಾಲ ಕೃಷ್ಣ ಕಾಂಚೋಡು ಅವರು ಸೇವೆಸಲ್ಲಿಸಿದ ರೆಜಿಮೆಂಟ್ ಬಹಳ ಪ್ರಮುಖ ಪಾತ್ರ ನಿರ್ವಹಿಸಿದ್ದು, ಅದರ ಸ್ಮರಣಾರ್ಥ ಕಾರ್ಯಾಚರಣೆ ಯಲ್ಲಿ ದೇಶಕ್ಕಾಗಿ ಅಮರರಾದವರನ್ನು ನೆನಪಿಸುತ್ತ ಅವರೆಲ್ಲರಿಗೆ ಶ್ರಧ್ಜಾಂಜಲಿ ಸಲ್ಲಿಸಿ ಆಚರಿಸುವ ದಿನವನ್ನು ಈ ವರ್ಷ ಕೇರಳದಕಲ್ಲಿಕೊಟೆ(ಕೋಝಿಕೋಡ್) ನಲ್ಲಿ ಆಚರಿಸಲಾಯಿತು.

Related posts

ಅಕ್ರಮ ಮರಳು ಸಾಗಾಟದ ಲಾರಿಗಳ ಮೇಲೆ ವೇಣೂರು ಪೊಲೀಸರ ದಾಳಿ

Suddi Udaya

ಉಜಿರೆ: ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ಸ್ವಚ್ಛತಾ ಅಭಿಯಾನ

Suddi Udaya

ಉಜಿರೆ ರುಡ್‌ ಸೆಟ್ ಸಂಸ್ಥೆಯಲ್ಲಿ ವಿಶೇಷ ಸಂವಾದ ಕಾರ್ಯಕ್ರಮ

Suddi Udaya

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ, ಮಾನಹಾನಿಕಾರಕ ಸುದ್ದಿ ಹರಡಿ ತೇಜೋವಧೆ ಆರೋಪ:ಶೇಖರ್ ಲಾಯಿಲ ವಿರುದ್ಧ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರು ಹಾಗೂ ಯೂತ್‌ಕಾಂಗ್ರೆಸ್ ಜಿಲ್ಲಾ ಸಮಿತಿ ಕಾರ್ಯದರ್ಶಿಯಿಂದ ಪೊಲೀಸರಿಗೆ ದೂರು

Suddi Udaya

ಅವಾಚ್ಯವಾಗಿ ಬೈದು ಹಲ್ಲೆ ,ದೈಹಿಕ ಹಿಂಸೆ ಆರೋಪ: ಪತಿಯ ವಿರುದ್ಧ ಪತ್ನಿ ವೇಣೂರು ಪೊಲೀಸ್ ಠಾಣೆಗೆ ದೂರು

Suddi Udaya

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿ ಹಾಗೂ ಜೆಸಿಐ ಮಂಜುಶ್ರೀ ಬೆಳ್ತಂಗಡಿ ಇವರ ಸಹಭಾಗಿತ್ವದಲ್ಲಿ ದೇಶಭಕ್ತಿ ಗೀತ ಗಾಯನ ಸ್ಪರ್ಧೆ

Suddi Udaya
error: Content is protected !!