ವೇಣೂರು ದ್ವಿಚಕ್ರ ವಾಹನಗಳ ಹೋಂಡಾ ಶೋರೂಮ್ ಉದ್ಘಾಟನೆ

Suddi Udaya

ವೇಣೂರು: ಇಲ್ಲಿನ ಹೊಸ ಬಸ್ ಸ್ಟ್ಯಾಂಡ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಿಸಿದ ದ್ವಿಚಕ್ರ ವಾಹನಗಳ ಹೋಂಡಾ ಶೋರೂಮ್ ಇದರ ಉದ್ಘಾಟನೆಯು ನ.12 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ನಮನ ಕ್ಲಿನಿಕ್ ನ ಡಾ. ಶಾಂತಿ ಪ್ರಸಾದ್, ವೇಣೂರು ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೋತ್ತಮ ರಾವ್, ಮಾಜಿ ತಾ‌ಪಂ ಸದಸ್ಯ ವಿಜಯ್ ಗೌಡ,ಉದ್ಯಮಿ ವಿಜಯ ಕುಮಾರ್ ಕಂಬಳಿ,ಪ್ರಮುಖರಾದ ಅಶೋಕ್ ಪಾಣೂರು,ನಯನೇಶ್ ಗೌಡ ಉಜಿರೆ,ಆಲ್ವಿನ್ ಡಿಸೋಜಾ,ಅರವಿಂದ ಶೆಟ್ಟಿ, ಆಶ್ರಫ್ ಗಾಂಧಿನಗರ,ವಿಜೇತ್ ಜೈನ್,ಸುಧತ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.

ಸಂಸ್ಥೆಯ ಮಾಲಕರಾದ ಬಾಲಕೃಷ್ಣ ದೇವಾಡಿಗ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ,ಸತ್ಕರಿಸಿದರು.

Leave a Comment

error: Content is protected !!