ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದಿಂದ ಕ್ಷೇಮ ನಿಧಿ ಯೋಜನೆಯ 10 ನೇ ಸಹಾಯಧನ ಹಸ್ತಾಂತರ

Suddi Udaya

ಬೆಳ್ತಂಗಡಿ : ಬೆಳ್ತಂಗಡಿ ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘ ತಾಲೂಕು ಸಮಿತಿ ಇದರ ರಿಕ್ಷಾ ಚಾಲಕರ ಆಪತ್ಕಾಲದ ನೆರವಿನ ಕ್ಷೇಮ ನಿಧಿ ಯೋಜನೆಯ 10ನೇ ಸಹಾಯಧನವನ್ನು ನಿಡ್ಲೆ ಗ್ರಾಮದ ಬರೆಂಗಾಯ ವನದುರ್ಗಾ ರಿಕ್ಷಾ ಚಾಲಕರ ಸಂಘದ ಸದಸ್ಯರಾದ ರಾಜೇಶ್ ಬರೆಂಗಾಯ ಇವರ ರಿಕ್ಷಾ ಅಪಘಾತದಲ್ಲಿ ಇವರಿಗೆ ಗಾಯಗಳಾಗಿ ಬೆನಕ ಆಸ್ಪತ್ರೆ ಉಜಿರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಮಾಡುತ್ತಿದ್ದಾರೆ. ಇವರಿಗೆ ಕ್ಷೇಮ ನಿಧಿ ರೂ 5,000/ವನ್ನು ಹಸ್ತಾಂತರಿಸಲಾಯಿತು

ಈ ಸಂದರ್ಭದಲ್ಲಿ ನೇತಾಜಿ ಆಟೋ ಚಾಲಕ ಮಾಲಕರ ಸಂಘ ಕಾಯರ್ತಡ್ಕ ಸಂಘದ ಮಾಜಿ ಆಧ್ಯಕ್ಷರು ಹಾಗೂ ಕಳೆಂಜ ಬಿಎಂಎಸ್ ಗ್ರಾಮ ಸಮಿತಿ ಅಧ್ಯಕ್ಷ ಉಮೇಶ್ ಕಾಯರ್ತಡ್ಕ ,ಬರೆಂಗಾಯ ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಶಿವರಾಮ ಬರೆಂಗಾಯ, ಕಾರ್ಯದರ್ಶಿ ದೀಕ್ಷಿತ್ ಬರೆಂಗಾಯ ಇವರು ಹಸ್ತಾಂತರಿಸಿದರು.

ಸದಸ್ಯರಾದ ಜಗದೀಶ್ ಬರೆಂಗಾಯ. ಅಶ್ವತ್ಥ್ ಬರೆಂಗಾಯ, ಜೀವನ್ ಬರೆಂಗಾಯ,ಮನೋಜ್ ಬರೆಂಗಾಯ ಉಪಸ್ಥಿತರಿದ್ದರು.

Leave a Comment

error: Content is protected !!