ತಾಲೂಕಿನ ಪ್ರಸಿದ್ದ ದೈವಪಾತ್ರಿ ರಾಮಣ್ಣ ಪೂಜಾರಿ ಹುಂಬೆಜೆ ನಿಧನ

Suddi Udaya

ಬಳಂಜ: ಬೆಳ್ತಂಗಡಿ ತಾಲೂಕಿನ ಪ್ರಸಿದ್ದ ದೈವ ಪಾತ್ರಿ,ಊರಿನ ಹಿರಿಯರು,ದೈವದ ಪಟ್ಟಿ ಪ್ರಧಾನರಾದ ನಾಲ್ಕೂರು ಗ್ರಾಮದ ಹುಂಬೆಜೆ ಮನೆಯ ರಾಮಣ್ಣ ಪೂಜಾರಿ (81ವ) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಸಂಜೆ 29 ರಂದು ಸ್ವಗೃಹದಲ್ಲಿ ನಿಧನರಾದರು.

ತಾಲೂಕಿನ ಪ್ರಸಿದ್ದ ದೈವಪಾತ್ರಿಯಾಗಿ ಗ್ರಾಮದಲ್ಲಿ ನಡೆಯುವ ದೈವದ ಆರಾಧನೆಯನ್ನು ಕಳೆದ ಹಲವಾರು ವರ್ಷಗಳಿಂದ ಮಾಡುತ್ತ ಬರುತ್ತಿದ್ದರು.

ದೇವಸ್ಥಾನ, ದೈವಸ್ಥಾನಗಳಲ್ಲಿ ಸೇವೆ ಸಲ್ಲಿಸಿ, ಊರಿನಲ್ಲಿ ಎಲ್ಲರಿಗೂ ಮಾರ್ಗದರ್ಶನ ಮಾಡುತ್ತ ಊರವರ ಪ್ರೀತಿ ವಿಶ್ವಾಸ ಗಳಿಸಿದ್ದರು.

ಮೃತರು ಪತ್ನಿ ಕಮಲ, ಒರ್ವ ಪುತ್ರ ದುಗ್ಗಯ್ಯ ಪೂಜಾರಿ,ಮೂವರು ಪುತ್ರಿಯರಾದ ಆಶಾ,ಶಕುಂತಲ,ವಸಂತಿ ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Leave a Comment

error: Content is protected !!