23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚುನಾವಣೆತಾಲೂಕು ಸುದ್ದಿ

ನಾರಾವಿ ಮಾಂಡೋವಿ ಮೋಟಾರ್ಸ್ ನಲ್ಲಿ 100 ನೇ ಕಾರಿನ ಕೀ ಹಸ್ತಾಂತರ ಕಾರ್ಯಕ್ರಮ

ನಾರಾವಿ: ದ.ಕ ಜಿಲ್ಲೆಯ ಪ್ರತಿಷ್ಠಿತ ಮಾರುತಿ ಸುಝುಕಿ ಕಾರುಗಳ ಅಧಿಕೃತ ಮಾರಾಟಗಾರರಾದ ಮಾಂಡೋವಿ ಮೋಟಾರ್ಸ್ ಪ್ರೈ. ಲಿ. ಮಂಗಳೂರು ಇವರ ನೂತನ ಶಾಖೆ ನಾರಾವಿಯಲ್ಲಿ ನೂರನೇ ಕಾರಿನ ಕೀಲಿ ಹಸ್ತಾಂತರ ಕಾರ್ಯಕ್ರಮ ನ.24 ರಂದು ನಡೆಯಿತು.

ಈ ಸಂದರ್ಭದಲ್ಲಿ ನೂತನ ಕಾರಿನ ಕೀಲಿಯನ್ನು ಗ್ರಾಹಕರಾದ ಕರುಣಾಕರ ಜೈನ್ ನಾರಾವಿ,ಪದ್ಮಪ್ರಸಾದ್ ಜೈನ್ ನಾರಾವಿ, ಸುಬ್ರಹ್ಮಣ್ಯ ಭಟ್ ಪಣಕಾಜೆ, ಹಬೀಬ್ ಮುತ್ರಿಮಜಲು ರವರಿಗೆ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್, ಉದ್ಯಮಿಗಳಾದ ರೋಶನ್ ಹೆಗ್ಡೆ, ಸುರೇಂದ್ರ ಕುಮಾರ್ ಹಾಗೂ ರವಿಕುಮಾರ್ ಅರಸಿಕಟ್ಟೆಉಪಸ್ಥಿತರಿದ್ದರು.

ಮಾಂಡೋವಿ ಮೋಟಾರ್ಸ್ ಮಂಗಳೂರು ರೂರಲ್ ಸೇಲ್ಸ್ ಮ್ಯಾನೇಜರ್ ಸುಜಿತ್ ಕಾರ್ಯಕ್ರಮ ನಿರೂಪಿಸಿ, ಎಜಿಎಂ Nexa ಸೇಲ್ಸ್ ಅಕ್ಷಯ್ ಕುಮಾರ್ ವಂದಿಸಿದರು.

ಈ ಸಂದರ್ಭದಲ್ಲಿ ಗಣೇಶ್ ಕುಲಾಲ್ (Works Manager)ನಾರಾವಿ, ಮಾಂಡೋವಿ ಮೋಟಾರ್ಸ್ ಕ್ಯಾಲಿಟಿ ಕೇರ್ ಮ್ಯಾನೇಜರ್ ಗಿರೀಶ್ ಎಲ್.ಪಿ, ಸೇಲ್ಸ್ ಆಫೀಸರ್ ಗಳಾದ ಕಿಶೋರ್ ಕುಮಾರ್, ಸುಹಾಸ್ ಜೈನ್, ಸುಮಂತ್ ರಾಜ್, ಲೋಕೇಶ್ ಉಪಸ್ಥಿತರಿದ್ದರು.

ಅತೀ ಕಡಿಮೆ ಸಮಯದಲ್ಲಿ ನಾರಾವಿ ಗ್ರಾಮೀಣ ಪ್ರದೇಶದಲ್ಲಿ ನೂರು ಕಾರುಗಳ ಮಾರಾಟಕ್ಕೆ ಸಹಕರಿಸಿದ ಎಲ್ಲಾ ನಾರಾವಿ ಪರಿಸರದ ಗ್ರಾಹಕರಿಗೆ ಮಾಂಡೋವಿ ಮೋಟಾರ್ಸ್ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿದೆ.

ಟೀಮ್ ಸೇಲ್ಸ್ ಮ್ಯಾನೇಜರ್ ಚರಣ್ ಕುಮಾರ್ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ , ಮಾಂಡೋವಿ ಮೋಟಾರ್ಸ್ಸ್ ಬಗ್ಗೆ ತಿಳಿಸಿದರು.

Related posts

ಬಜಿರೆ ಪಾಲ್ದ್ಯಾರು ಮನೆಯ ಶ್ರೀಮತಿ ಚಿನ್ನಮ್ಮ ನಿಧನ

Suddi Udaya

ಶತಮಾನದ  3ನೇ ವೇಣೂರು ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಚಾಲನೆ: ಯುಗಳ ಮುನಿಗಳು, ಮಾತಾಜಿಗಳು, ಧಮಾ೯ಧಿಕಾರಿ ಡಾ.ಹೆಗ್ಗಡೆ ಹಾಗೂ ಗಣ್ಯರು ಉಪಸ್ಥಿತಿ

Suddi Udaya

ಕಾಪಿನಡ್ಕದಲ್ಲಿ ಗೆಳೆಯರ ಬಳಗದಿಂದ ಶ್ರೀ ಕೃಷ್ಣಾಷ್ಟಮಿ‌ ಸಂಭ್ರಮ : ಸಾಧಕರಿಗೆ ಸನ್ಮಾನ, ಶಾಲೆಗೆ ಗೊದ್ರೇಜ್ ಹಸ್ತಾಂತರ, ಕ್ರೀಡಾಕೂಟ

Suddi Udaya

ಬೆಳ್ತಂಗಡಿ: ಜೆಪಿ ಅಟ್ಯಾಕ್ರ್ಸ್ ಪ್ರಾಯೋಜಕತ್ವದಲ್ಲಿ ತಾಲೂಕು ಮಟ್ಟದ ಅಂಡರ್ ಆರ್ಮ್ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

Suddi Udaya

ಬೆದ್ರಬೆಟ್ಟು: ಜಲ್ಸತುಲ್ ಜಮೀಲ್ ಮಿಲಾದ್ 2024 ಪ್ರತಿಭಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಸ.ಪ್ರ.ದ ಕಾಲೇಜಿನಲ್ಲಿ ಮಾನವಿಕ ಸಂಘದ ಉದ್ಘಾಟನೆ

Suddi Udaya
error: Content is protected !!