September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಭಟ್ಕಳ ಕರಿಕಲ್ ಧ್ಯಾನ ಮಂದಿರದ ಪ್ರತಿಷ್ಠಾಪನಾ ವರ್ಧಂತಿ ಉತ್ಸವ

ಧರ್ಮದಿಂದ ಭಗವಂತನ ಅನುಗ್ರಹ: ಕನ್ಯಾಡಿ ಶ್ರೀ

ಬೆಳ್ತಂಗಡಿ: ಧರ್ಮ ಮಾರ್ಗದಿಂದ ನಡೆದರೆ ಭಗವಂತನ ಅನುಗ್ರಹ ಯಾವತ್ತೂ ಇರುತ್ತದೆ ಎಂದು ಶ್ರೀರಾಮ ಕ್ಷೇತ್ರದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ನುಡಿದರು.

ಅವರು ಮಾ.4ರಂದು ಕರಿಕಲ್ ಧ್ಯಾನ ಮಂದಿರದ ಪ್ರತಿಷ್ಠಾಪನಾ ವರ್ಧಂತಿ ಉತ್ಸವದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು.

ಒಂದು ಒಳ್ಳೆಯ ಪದವಿ ಹಾಗೂ ಗೌರವ ಸಿಗಬೇಕಾದರೆ ನಮಗೆ ಪೂರ್ವಜನ್ಮದ ಪುಣ್ಯ ಇರಬೇಕಾಗುತ್ತದೆ. ಭಗವಂತನನನ್ನು ಸೇರಬೇಕಾದರೆ ವಿವೇಕ, ಇಂದ್ರಿಯ ನಿಗ್ರಹ ಹಾಗೂ ವೈರಾಗ್ಯ ಈ ಮೂರು ಒಟ್ಟಿಗೆ ಆಗಬೇಕು. ಭಗವಂತನ ಆತ್ಮವೇ ನಮ್ಮ ಜೀವಾತ್ಮವಾಗಿದೆ. ಭಗವಂತನನ್ನು ಸೇರಬೇಕಾದರೆ ರಾಜಯೋಗ, ಭಕ್ತಿಯೋಗ ಹಾಗೂ ಕರ್ಮ ಯೋಗ ಬೇಕಾಗುತ್ತದೆ. ಗಟ್ಟಿಯಾದ ವ್ಯಕ್ತಿತ್ವ ಪಡೆಯಬೇಕಾದರೆ ಯೋಗಿಯಾಗಬೇಕು. ಆತ್ಮ ಮತ್ತು ಪರಮಾತ್ಮನ ಒಟ್ಟಿಗೆ ಸೇರಿಸುವ ಪ್ರಕ್ರಿಯೇಯೆ ಯೋಗವಾಗಿದೆ ಎಂದು ಹೇಳಿದರು.

ನಮ್ಮ ಆತ್ಮವನ್ನು ನಾವೇ ಉದ್ದರಿಸಬೇಕು. ನಾವೆಲ್ಲರೂ ಪರಸ್ಪರ ದ್ವೇಷವನ್ನು ಬಿಟ್ಟು ನಾವೆಲ್ಲರೂ ಎಲ್ಲರನ್ನು ಪ್ರೀತಿಸುವಂತವರಾಗಬೇಕು. ಧರ್ಮ ಆಧಾರಿತ ಜೀವನ ನಮ್ಮನ್ನು ಸುಖದ ಕಡೆಗೆ ಕೊಂಡೊಯ್ಯುತ್ತದೆ, ಸಂತರ ಸಾಧನೆ ತಪಸ್ಸು ಸನಾತನ ಪರಂಪರೆಯ ಮುಂದುವರಿಕೆಗೆ ಪೂರವಾಗಿರುತ್ತದೆ ಎಂದರು.

ಪ್ರತಿಷ್ಠಾಪನಾ ವರ್ಧಂತಿ ಉತ್ಸವದ ಅಂಗವಾಗಿ ಧ್ಯಾನ ಮಂದಿರದಲ್ಲಿ ಬೆಳಿಗ್ಗೆ ವಿವಿಧ ಹೋಮ ಹವನಗಳೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ನಂತರ ಲೋಕಕಲ್ಯಾಣಕ್ಕಾಗಿ ಶ್ರೀರಾಮತಾರಕ ಮಹಾಯಜ್ಞ ವೇದಮೂರ್ತಿ ಲಕ್ಷ್ಮೀಪತಿ ಇವರ ನೇತೃತ್ವದಲ್ಲಿ ಅರ್ಚಕರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಚಿವ ಮಂಕಾಳ ವೈದ್ಯ, ಶ್ರೀರಾಮ ಕ್ಷೇತ್ರದ ನೂತನ ಟ್ರಸ್ಟಿಗಳಾಗಿ ಆಯ್ಕೆಯಾದ, ಎಚ್.ಆರ್.ನಾಯ್ಕ, ಕೋನಳ್ಳಿ, ಚಂದ್ರ ಪೂಜಾರಿ ಸಾಗರ, ಕೆ.ಆರ್.ನಾಯ್ಕ, ಭಟ್ಕಳ, ರವೀಂದ್ರ ಪೂಜಾರಿ, ತುಕಾರಾಮ ಸಾಲ್ಯಾನ್ ಹಾಗೂ ರವಿದಾಸ ಬೆಂಗಳೂರು ಇವರನ್ನು ಸ್ವಾಮೀಜಿಗಳು ಶಾಲು ಹೊದೆಯಿಸಿ ಗೌರವಿಸಿದರು.

ಪ್ರಶ್ನೆ, ನಾರಾಯಣ ಬಾರ್ಪಿ, ಉತ್ತರಕನ್ನಡ, ಶಿವಮೊಗ್ಗ, ಉಡುಪಿ ಭಟ್ಕಳ ಗುರುಮಠ ದೇವಸ್ಥಾನದ ಅಧ್ಯಕ್ಷ ಅರುಣ ನಾಯ್ಕ, ಸಾರದಹೊಳೆ ಹನುಮಂತ ದೇವಸ್ತಾನದ ಅಧ್ಯಕ್ಷ ನಾಗೇಂದ್ರ ನಾಯ್ಕ, ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಅಧ್ಯಕ್ಷ ಶ್ರೀಧರ ನಾಯ್ಕ ಹಾಗೂ ಆಡಳಿತ ಮಂಡಳಿಯ ಸದಸ್ಯರು ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಉ.ಕ.ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಪ್ರಮುಖರ ಪ್ರಮುಖರಾದ ಡಿ.ಬಿ.ನಾಯ್ಕ, ಭಟ್ಕಳ ನಾಗೇಶ ನಾಯ್ಕ ಕಾಗಾಲ, ರಾಮಾ ಮೊಗೇರ, ಅಟೋ ಗಂಗಾಧರ, ಬೆಂಗಳೂರು, ಈರಪ್ಪ ಗರ್ಡಿಕರ, ಗೋವಿಂದ ನಾಯ್ಕ, ಕೃಷ್ಣ ನಾಯ್ಕ, ಬ್ಲಾಕ ಕಾಂಗ್ರೆಸ್ ವೆಂಕಟೇಶ ನಾಯ್ಕ, ವಾಮನ ನಾಮನ ಕೃಷ್ಣ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲೆಯ ವಿವಿಧೆಡೆಯಿಂದ ಪ್ರಮುಖರು, ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ವಿವಿಧ ಜಿಲ್ಲೆಯ ಪಧಾಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಲಕ್ಷ್ಮೀಪತಿ ಇವರಿಂದ ವೇಧಘೋಷ ನಡೆಯಿತು. ಶಿಕ್ಷಣ ನಾರಾಯಣ ನಾಯ್ಕ ಎಲ್ಲರನ್ನು ಸ್ವಾಗತಿಸಿದರು. ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷಶ್ರೀಧರ ನಾಯ್ಕ ವಂದಿಸಿದರು.

Related posts

ಆ.18: ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಕೆಸರ್ ಕಂಡೊಡು ಗೌಡರೆ ಗೌಜಿ ಗಮ್ಮತ್ : ಶಾಸಕ ಹರೀಶ್ ಪೂಂಜರಿಗೆ ಆಮಂತ್ರಣ

Suddi Udaya

ಶಿಶಿಲ: ತಾಯಿ ಮಗಳ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ: ಆರೋಪಿಗೆ ಕಠಿಣ ಶಿಕ್ಷೆ ಆಗುವಂತೆ ಶ್ರೀ ಮತ್ಸ್ಯ ಶಿವ ದುರ್ಗಾ ಮಹಿಳಾ ಭಜನಾ ಮಂಡಳಿಯಿಂದ ಸರಕಾರಕ್ಕೆ ಮನವಿ

Suddi Udaya

ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಏಳನೇ ರ‍್ಯಾಂಕ್  ಪಡೆದ ಚಿನ್ಮಯ್ ರವರಿಗೆ ಉಜಿರೆ ವಲಯ ಹಾಗೂ ಉಪ್ಪಿನಂಗಡಿ ಮಂಡಲದ ವತಿಯಿಂದ ಗೌರವ

Suddi Udaya

ಜ.31-ಫೆ.4: ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ

Suddi Udaya

ಶಿಲಾ೯ಲು : ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

Suddi Udaya

ಡಿ.14 -20: ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಜೆಸಿ ಸಪ್ತಾಹ- 2024: ಸಾಧಕರಿಗೆ ಸನ್ಮಾನ, ಸಮಾಜಸೇವಾ ಸಂಘಟನೆಗಳಿಗೆ ಸೇವಾಶ್ರೀ ಪುರಸ್ಕಾರ, ಮನೋರಂಜನಾ ಕಾರ್ಯಕ್ರಮ

Suddi Udaya
error: Content is protected !!