ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ವಸ್ತುಪ್ರದರ್ಶನ ಮೇಳದಲ್ಲಿ ಮಾಂಡೋವಿ ಮೋಟಾರ್ಸ್ ಪ್ರೈ ಲಿ.ಸಂಸ್ಥೆ ಭಾಗಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಪ್ರಥಮ‌ ಗ್ರಾಹಕರಿಗೆ ಕಾರು ಹಸ್ತಾಂತರ

Suddi Udaya

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ಪ್ರಯುಕ್ತ ವಸ್ತುಪ್ರದರ್ಶನ ಮೇಳದಲ್ಲಿ ಮಾಂಡೋವಿ ಮೋಟಾರ್ಸ್ ಪ್ರೈ ಲಿ. ನಾರಾವಿ ಶಾಖೆ ಇದರ ವಾಹನಗಳ ಪ್ರದರ್ಶನ ಹಾಗೂ ಮಾಹಿತಿಕೇಂದ್ರವನ್ನು ಡಿ.8 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಪ್ರಥಮ ಗ್ರಾಹಕರಾದ ಎನ್.ಆರ್ ಪುರದ ಸತೀಶ್ ಕುಮಾರ್ ರವರಿಗೆ ಮಾರುತಿ ಸುಝುಕಿ Ertiga CNG ಕಾರಿನ ಕೀಲಿಯನ್ನು ಧರ್ಮಾಧಿಕಾರಿಗಳು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾಂಡೋವಿ ಮೋಟಾರ್ಸ್ ನ ಶಶಿಧರ ಕಾರಂತ್ DGM Sales, ಸುಜಿತ್ ಕುಮಾರ್ Manager Rural Sales, ಸುಪಾರ್ಶ್ವ ಶೆಟ್ಟಿ Finance Manager, ಪ್ರದೀಪ್ ASM, ಚರಣ್ ಕುಮಾರ್ Team Manager, ಸುಮಂತ್ ರಾಜ್ Relationship Manager ಉಪಸ್ಥಿತರಿದ್ದರು.

ಈ ಮಳಿಗೆಯು ಡಿ.13 ರ ವರೆಗೆ ತೆರೆದಿದ್ದು, ಎಲ್ಲಾ ಗ್ರಾಹಕರು ಕಾರುಗಳಿಗೆ ಇರುವ ವರ್ಷದ ಅತ್ಯಧಿಕ ಉಳಿತಾಯಗಳ ಸದುಪಯೋಗ ಪಡೆಯಲು ಮಾಂಡೋವಿ ಮೋಟಾರ್ಸ್ ಆಡಳಿತವರ್ಗ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಚರಣ್ ಬೆಳ್ತಂಗಡಿ 9972460032 ಸಂಪರ್ಕಿಸಲು ಕೋರಿದೆ.

Leave a Comment

error: Content is protected !!