ಕೊಕ್ಕಡ : ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ, ಕೊಕ್ಕಡ ಇಲ್ಲಿ ಕೋರಿ ಜಾತ್ರೆಯು ಡಿ.17ರಂದು ನೀಲೇಶ್ವರ ಎಡಮನೆ ಬ್ರಹ್ಮಶ್ರೀ ಕೆ. ಯು. ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ.
ಡಿ. 17ರಂದು ಪೂರ್ವಾಹ್ನ 8.00ಕ್ಕೆ ಗಣಹೋಮ, ಪೂರ್ವಾಹ್ನ 10.00ಕ್ಕೆ ಏಕಾದಶರುದ್ರ, ಮಧ್ಯಾಹ್ನ ಮಹಾಪೂಜೆ ನಂತರ ದೇವರ ಗದ್ದೆಗೆ ಜಾನುವಾರುಗಳು ಇಳಿಯುವುದು, ಸಾಯಂಕಾಲ 4.30ಕ್ಕೆ ದೇವರ ಉತ್ಸವ ನಡೆಯಲಿದೆ.
ಸಾಯಂಕಾಲ 5.30 ರಿಂದ ರಾತ್ರಿ 12ರ ವರೆಗೆ (ಕಾಲಮಿತಿ ) ಯಕ್ಷಗಾನ ಬಯಲಾಟ ಶ್ರೀದೇವಿ ಮಹಾತ್ಮೆ ಜರುಗಲಿದೆ.













