ಗುರುವಾಯನಕೆರೆ: ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಾಮಪತ್ರ ಸಲ್ಲಿಕೆ ಡಿ.
5 ರಂದು ಸಂಘದ ಕಛೇರಿಯಲ್ಲಿ ರಿಟರ್ನಿಂಗ್ ಅಧಿಕಾರಿ ಪ್ರತಿಮಾ ಬಿ.ವಿ ರವರಿಗೆ ಸಲ್ಲಿಸಿದರು.

ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಡಿ.17 ರಂದು ಸಹಕಾರ ಸಂಘಗಳ ಉಪನಿಬಂಧಕರ ಅಧಿಸೂಚನೆಯಂತೆ ನಡೆಯಲಿದೆ. ಬಿಜೆಪಿ ಬೆಂಬಲಿತ ಸಹಕಾರಿ ಭಾರತಿ ಸಾಲಗಾರ ಸಾಮಾನ್ಯ ಬೆಳ್ತಂಗಡಿ ಕ್ಷೇತ್ರದಿಂದ ಮುಗಳಿ ನಾರಾಯಣ ಭಟ್. ಭುಜಂಗ ಶೆಟ್ಟಿ, ಮೇಲಂತಬೆಟ್ಟು ಸಾಮಾನ್ಯ ಕ್ಷೇತ್ರದಿಂದ ಕಿಶೋರ್ ಕುಮಾರ್ ಕುರ್ತೋಡಿ, ಸತ್ಯಶಂಕರ ಭಟ್, ಕುವೆಟ್ಟು ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಅರುಣ್ ಕುಲಾಲ್, ಹಿಂದುಳಿದ ವರ್ಗ ಬಿ ಮೀಸಲು ಕುವೆಟ್ಟು ಕ್ಷೇತ್ರದಿಂದ ಪುರಂದರ ಶೆಟ್ಟಿ ಪಾಡ್ಯಾರು, ಹಿಂದುಳಿದ ವರ್ಗ ಎ ಮೀಸಲು ಮೇಲಂತಬೆಟ್ಟು ಕ್ಷೇತ್ರದಿಂದ ಮೋಹನ್ ಕೆ, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಮೋಹನ್ ನಾಯ್ಕ್, ಮಹಿಳಾ ಮೀಸಲು ಸ್ಥಾನದಿಂದ ಜಯಂತಿ ಆಚಾರ್ಯ, ಸುಂದರಿ ನಾಯ್ಕ ಬೆಳ್ತಂಗಡಿ, ಸಾಲಗಾರರಲ್ಲದ ಕ್ಷೇತ್ರ ಶಶಿರಾಜ್ ಶೆಟ್ಟಿ, ಗುರುವಾಯನಕೆರೆ ನಾಮಪತ್ರ ಸಲ್ಲಿಸಿದರು.













